ಚಳಿಗೆ ಉತ್ತರ ಪ್ರದೇಶ ತತ್ತರ: 24 ಸಾವು

ತೀವ್ರ ಚಳಿಗೆ ಉತ್ತರ ಪ್ರದೇಶ ತೀವ್ರವಾಗಿ ತತ್ತರಿಸಿದ್ದು...
ಭೀಕರ ಚಳಿಯ ಮಧ್ಯೆಯೂ ಶಾಲೆಗೆ ಹೋಗುತ್ತಿರುವ ಅಮೃತಸರದ ಮಕ್ಕಳು
ಭೀಕರ ಚಳಿಯ ಮಧ್ಯೆಯೂ ಶಾಲೆಗೆ ಹೋಗುತ್ತಿರುವ ಅಮೃತಸರದ ಮಕ್ಕಳು
Updated on

ಲಖನೌ/ಡೆಹ್ರಾಡೂನ್: ತೀವ್ರ ಚಳಿಗೆ ಉತ್ತರ ಪ್ರದೇಶ ತೀವ್ರವಾಗಿ ತತ್ತರಿಸಿದ್ದು, ಭೀಕರ ಚಳಿಯಿಂದಾಗಿ ಕಳೆದ 24 ಗಂಟೆಗಳಲ್ಲಿ 24 ಮಂದಿ ಅಸುನೀಗಿದ್ದಾರೆ.

ಉತ್ತರ ಪ್ರದೇಶದ ಹಲ್ದ್‌ವಾನಿಯಲ್ಲಿ ಇಬ್ಬರು, ನೈನಿತಾಲ್‌ನಲ್ಲಿ ಮೂವರು ಸೇರಿದಂತೆ ಭೀಮ್‌ತಲ್ ಹಾಗೂ ಬಾಗೆಶ್ವರ್‌ನಲ್ಲಿ 6 ಮಂದಿ ಸಾವನ್ನಪ್ಪಿದ್ದು ಒಟ್ಟು 24 ಮಂದಿ ಶೀತ ಗಾಳಿಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಾಗೇಶ್ವರ ಮತ್ತು ಅಲ್ಮೋರಾ ಹಿಮಾಲಯದಲ್ಲಿ ಅತೀವ ಚಳಿಯಿದ್ದು, ಡಿಸೆಂಬರ್ ಮಧ್ಯಂತರಲ್ಲಿ ಈ ರೀತಿಯ ಚಳಿಯ ಅನುಭವವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಅಲ್ಮೋರಾ, ಪಿಥೋರಗಡ್ ಮತ್ತು ಕುಮಾನ್‌ನಲ್ಲಿರುವ ಪ್ರದೇಶಗಳಲ್ಲಿ ತಾಪಮಾನ 1 ಡಿಗ್ರಿ ಸೆಲ್ಸಿಯಸ್‌ನಿಂದ ಮೈನಸ್ 4 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಲಖನೌನಲ್ಲಿ 6.6 ಡಿಗ್ರಿ ಸೆಲ್ಸಿಯಸ್ ತಾಪಮಾನ ಬುಧವಾರ ದಾಖಲಾಗಿದೆ. ಇದು ಸಾಮಾನ್ಯ ತಾಪಾಮಾನಕ್ಕಿಂತ ಕಡಿಮೆ ತಾಪಮಾನ ಎಂದು ವರದಿಯಾಗಿದೆ. ಈಗಾಗಲೇ ಉತ್ತರ ಪ್ರದೇಶದಾದ್ಯಂತ ಮಂಜು ಬೀಳುತ್ತಿದ್ದು, ಶೀತ ಗಾಳಿ ಬೀಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com