ಚೌಹಾಣ್ ವಿಮಾನ ತಳ್ಳಿದ ಪೊಲೀಸರು!

ಸೈಬೀರಿಯಾದಲ್ಲಿ ಕೊರೆಯುವ ಚಳಿಯಿಂದಾಗಿ ಥಂಡಿಹೊಡೆದಿದ್ದ...
ಶಿವರಾಜ್‌ಸಿಂಗ್ ಚೌಹಾಣ್‌ರಿದ್ದ ವಿಮಾನ
ಶಿವರಾಜ್‌ಸಿಂಗ್ ಚೌಹಾಣ್‌ರಿದ್ದ ವಿಮಾನ

ಛಂದ್ವಾರಾ: ಸೈಬೀರಿಯಾದಲ್ಲಿ ಕೊರೆಯುವ ಚಳಿಯಿಂದಾಗಿ ಥಂಡಿಹೊಡೆದಿದ್ದ ವಿಮಾನವನ್ನು ಪ್ರಯಾಣಿಕರೇ ತಳ್ಳಿ ಚಾಲೂ ಮಾಡಿದ ಪ್ರಸಂಗ ನಿಮಗೆ ನೆನಪಿರಬಹುದು. ಇದೇ ಘಟನೆಯನ್ನು ನೆನಪಿಸುವ ಪ್ರಸಂಗ ಮಧ್ಯ ಪ್ರದೇಶದಲ್ಲೂ ನಡೆದಿದೆ. ಆದರೆ, ಇಲ್ಲಿ ವಿಮಾನ ತಳ್ಳಿದ್ದು ಮಾತ್ರ ಪೊಲೀಸರು!
 
ಹೌದು, ಇಲ್ಲಿನ ಛಾಂದ್ವಾರಾ ವಿಮಾನ ನಿಲ್ದಾಣ ಸೋಮವಾರ ಇಂಥದ್ದೊಂದು ಪ್ರಸಂಗಕ್ಕೆ ಸಾಕ್ಷಿಯಾಯಿತು. ಸಿಎಂ ಶಿವರಾಜ್‌ಸಿಂಗ್ ಚೌಹಾಣ್‌ರಿದ್ದ ವಿಮಾನ ಮಧ್ಯಾಹ್ನ 12 ಗಂಟೆ ವೇಳೆಗೆ ಛಂದ್ವಾರಾದಲ್ಲಿ ಇಳಿದಿತ್ತು.

ಕೆಲ ಹೊತ್ತಿನ ಬಳಿಕ ಕೇಂದ್ರದ ಮಾಜಿ ಸಚಿವ ಕಮಲ್‌ನಾಥ್ ಅವರ ವಿಮಾನವೂ ಇಲ್ಲೇ ಇಳಿಯುವುದಿತ್ತು. ಆದರೆ, ಚೌಹಾಣ್ ವಿಮಾನದ ಎಂಜಿನ್ ಚಾಲೂ ಆಗದ ಕಾರಣ ಕೊನೆಗೆ ಅಲ್ಲಿದ್ದ ಪೊಲೀಸರೇ ನೆರವಿಗೆ ಧಾವಿಸಬೇಕಾಯಿತು. ಇಷ್ಟೊತ್ತಿಗಾಗಲೇ ಏರ್‌ಪೋರ್ಟ್‌ನತ್ತ ಆಗಮಿಸಿದ್ದ ಕಮಲ್‌ನಾಥ್ ಅವರಿದ್ದ ವಿಮಾನ ಆಗಸದಲ್ಲೇ 20 ನಿಮಿಷ ಗಿರಕಿ ಹೊಡೆಯಬೇಕಾಗಿಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com