ಬಾಳಾಠಾಕ್ರೆಗೂ ಭಾರತರತ್ನ ನೀಡಿ: ಶಿವಸೇನೆ

ಬಾಳಾಠಾಕ್ರೆ
ಬಾಳಾಠಾಕ್ರೆ

ಮುಂಬೈ: ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾಠಾಕ್ರೆ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತರತ್ನ ಗೌರವ ನೀಡಬೇಕೆಂದು ಶಿವಸೇನೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿ. ಪಂಡಿತ್ ಮದನ್ ಮೋಹನ್ ಮಾಳವೀಯಾ ಅವರಿಗೆ ಭಾರತರತ್ನ ಪುರಸ್ಕಾರ ಪ್ರಕಟವಾದ ಬೆನ್ನಲ್ಲೇ ಬಾಳಾಠಾಕ್ರೆ ಭಾರತರತ್ನ ನೀಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ.

ವಾಜಪೇಯಿ ಅವರಿಗೆ ಪುರಸ್ಕಾರ ಸಂದಿರುವುದು ಅತ್ಯಂತ ಸಂತಸದ ಸಂಗತಿ. ಅಂತೆಯೇ ಠಾಕ್ರೆ ಅವರೂ ಭಾರತರತ್ನ ಪುರಸ್ಕಾರಕ್ಕೆ ಅರ್ಹರು. ಬಾಳಾಠಾಕ್ರೆ ಬಡವರ ಪಾಲಿನ ದನಿಯಾಗಿದ್ದರು.

ಬಡವರ ಶ್ರೇಯೋಭಿವೃದ್ಧಿಗಾಗಿ ಅವರಿತ ಶ್ರಮವಹಿಸಿದ ಅವರಿಗೆ ಭಾರತರತ್ನ ನೀಡದರೆ ಬಡವರಿಗೆ ನ್ಯಾಯ ದೊರೆತಂತೆ ಎಂದು ಶಿವಸೇನೆ ಮುಖಂಡ ಮನೋಹರ್ ಜೋಶಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com