ಎಂ ಎನ್ ಎಸ್ ನಾಯಕರ ರಾಜೀನಾಮೆ ಸ್ವೀಕರಿಸಿದ ರಾಜ್ ಠಾಕ್ರೆ

ಇತ್ತೀಚಿನ ಮಹಾರಾಷ್ಟ್ರ ಚುನಾವಣೆಯಲ್ಲಿ ಎಂ ಎನ್ ಎಸ್ ಪಕ್ಷ ದಯನೀಯ ಸೋಲು ಕಂಡ ನಂತರ ...
ರಾಜ್ ಠಾಕ್ರೆ
ರಾಜ್ ಠಾಕ್ರೆ
Updated on

ಮುಂಬೈ: ಇತ್ತೀಚಿನ ಮಹಾರಾಷ್ಟ್ರ ವಿದಾನಸಭಾ ಚುನಾವಣೆಯಲ್ಲಿ ಎಂ ಎನ್ ಎಸ್ ಪಕ್ಷ ದಯನೀಯ ಸೋಲು ಕಂಡ ನಂತರ ಈಗ ಪಕ್ಷದ ಕೆಲವು ಪ್ರಮುಖ ರಾಜಕೀಯ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಹಾಗು ಎಂ ಎನ್ ಎಸ್ ಪಕ್ಷದ ಅಧ್ಯಕ್ಷ ರಾಜ್ ಠಾಕ್ರೆ ಅವರೆಲ್ಲರ ರಾಜೀನಾಮೆಗಳನ್ನು ಸ್ವೀಕರಿಸಿದ್ದಾರೆ.

"ನಮ್ಮ ಪಕ್ಷದ ನಾಯಕರು ಕಳುಹಿಸಿದ ಎಲ್ಲ ರಾಜೀನಾಮೆಗಳನ್ನು ಸ್ವೀಕರಿಸಿದ್ದೇನೆ. ಈಗ ನನ್ನ ಬೆಂಬಲಕ್ಕೆ ಯಾರಿದ್ದಾರೆ ಮತ್ತು ಯಾರಿಲ್ಲ ಎಂಬುದು ತಿಳಿದಿದೆ" ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಕ್ಷದ ಹಿರಿಯ ನಾಯಕರು ಮತ್ತು ಮಾಜಿ ಶಾಸಕರಾದ ಪ್ರವೀಣ್ ದಾರೇಕರ್ ಮತ್ತು ವಸಂತ್ ಗೀತೆ ಅವರು ರಾಜೀನಾಮೆ ನೀಡಿದ ಬಗ್ಗೆ ತಮ್ಮ ಮೌನ ಮುರಿದಿರುವ ರಾಜ್ ಠಾಕ್ರೆ, ಪಕ್ಷದಿಂದ ಹೊರ ಹೋಗುತ್ತಿರುವ ಸದಸ್ಯರ ಮನವೊಲಿಸುವ ಯಾವ ಪ್ರಯತ್ನವನ್ನೂ ರಾಜ್ ಮಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ತಾನು ಸ್ಪರ್ಧಿಸದ ೨೮೮ ವಿಧಾನಸಭಾ ಕ್ಷೇತ್ರಗಳಲ್ಲಿ, ಜುನ್ನಾರ್ (ಪುಣೆ) ಕ್ಷೇತ್ರವನ್ನು ಮಾತ್ರ ಎಂ ಎನ್ ಎಸ್ ಗೆದ್ದುಕೊಂಡಿತ್ತು ಹಾಗು ಮತಗಳು ಪಾಲು ೩% ಗೆ ಇಳಿದಿತ್ತು.

೨೦೦೯ ರ ವಿದಾನಸಭಾ ಚುನಾವಣೆಯಲ್ಲಿ 143 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ೧೩ ಸ್ಥಾನ ಗೆದ್ದುಕೊಂಡಿದ್ದ ಎಂ ಎನ್ ಎಸ್ ೧೧.೮೮ % ವೋಟ್ ಶೇರ್ ಪಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com