ಮಲಯಾಳಂ ಸಾಹಿತಿ ಬಿ.ಹೃದಯಕುಮಾರಿ ನಿಧನ

ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಿ.ಹೃದಯಕುಮಾರಿ ವಿಧಿವಶ.....
ಸಾಹಿತಿ ಬಿ.ಹೃದಯಕುಮಾರಿ ಸಾಂಧರ್ಭಿಕ ಚಿತ್ರ
ಸಾಹಿತಿ ಬಿ.ಹೃದಯಕುಮಾರಿ ಸಾಂಧರ್ಭಿಕ ಚಿತ್ರ
Updated on

ತಿರುವನಂತಪುರ: ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಿ.ಹೃದಯಕುಮಾರಿ ರವರು ಶನಿವಾರ ವಿಧಿವಶರಾಗಿದ್ದಾರೆ.

ಸರ್ಕಾರಿ ಮಹಿಳಾ ಕಾಲೇಜಿನ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಹೃದಯಕುಮಾರಿಯವರಿಗೆ 84 ವರ್ಷ ವಯಸ್ಸಾಗಿದ್ದು, ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಎರಡು ವಾರಗಳ ಹಿಂದೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಅಸುನೀಗಿದ್ದಾರೆ.

ಸಾಹಿತಿ ಹಾಗೂ ವಿಮರ್ಶಕರಾಗಿದ್ದ ಬಿ.ಹೃದಯಕುಮಾರಿ ಹಲವು ಪುಸ್ತಕಗಳನ್ನು ಬರೆದಿದ್ದು, 1991ರಲ್ಲಿ 'ಕಲ್ಪಾನಿಕಥಾ' ಎಂಬ ಪುಸ್ತಕಕ್ಕೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದು ಮಗ ಬೊದೇಶ್ವರನ್ ಸಾಹಿತಿ ಹಾಗೂ ಹೋರಾಟಗಾರರಾಗಿದ್ದು, ಮಗಳು ಸಂಸ್ಕೃತ ವಿದ್ವಾಂಸಕರಾಗಿದ್ದಾರೆ.

ಕೇರಳ ಮುಖ್ಯಮಂತ್ರಿ ಒಮೆನ್ ಚಂಡಿ, ವಿರೋಧ ಪಕ್ಷದ ನಾಯಕ ವಿ.ಎಸ್ ಅಚ್ಚುತಾನಂದನ್ ಸೇರಿದಂತೆ ಹಲವು ಗಣ್ಯರು ಹೃದಯಕುಮಾರಿ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಇಂದು ಸಂಜೆ 5 ಗಂಟೆಗೆ ಶಾಂತಿ ಕವದಂನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com