ಮಂಕಿಗೇಟ್ ಪ್ರಕರಣ: ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ವಾಗ್ದಾಳಿ

ಸಾಂದರ್ಭಿಕ ಚಿತ್ರ- ಅಲನ್ ಬಾರ್ಡರ್
ಸಾಂದರ್ಭಿಕ ಚಿತ್ರ- ಅಲನ್ ಬಾರ್ಡರ್
Updated on

ಸಿಡ್ನಿ: ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಮಂಕಿಗೇಟ್ ಪ್ರಕರಣ ನಡೆದ ಸಂದರ್ಭದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ), ತನ್ನ ಸ್ವಾಭಿಮಾನವನ್ನು ಬಿಸಿಸಿಐಗೆ ಅಡ ಇಟ್ಟು ಹೇಡಿಯಂತೆ ವರ್ತಿಸಿತು ಎಂದು ಆಸೀಸ್‌ನ ಮಾಜಿ ಕ್ರಿಕೆಟಿಗ ಅಲನ್ ಬಾರ್ಡರ್ ಹೇಳಿಕೊಂಡಿದ್ದಾರೆ.

ತಮ್ಮ ಇತ್ತೀಚಿನ 'ಕ್ರಿಕೆಟ್ ಆ್ಯಸ್ ಐ ಸೀ ಇಟ್‌' ಎಂಬ ಪುಸ್ತಕದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು, ಮಂಕಿಗೇಟ್ ಪ್ರಕರಣದಲ್ಲಿ ಸಿಎ ನಡೆದುಕೊಂಡ ರೀತಿಗೆ ಬೇಸತ್ತು ತಾವು ಆ ಮಂಡಳಿಯನ್ನು ತ್ಯಜಿಸಿದ್ದಾಗಿ ತಿಳಿಸಿದ್ದಾರೆ. ಮಂಕಿಗೇಟ್ ಪ್ರಕರಣದ ಬಿಸಿ ತಾರಕ್ಕೇರಿದಾಗಲೂ ಕ್ರಿಕೆಟ್ ಆಸ್ಟ್ರೇಲಿಯಾ, ತನ್ನ ಆಟಗಾರರ ಮೇಲೆ ಭಾರತದ ಯಾವುದೇ ಆಟಗಾರನ ವಿರುದ್ಧ ಹೇಳದಂತೆ ಒತ್ತಡ ಹೇರಿತು. ಈ ಮೂಲಕ, ಸತ್ಯವನ್ನು ಮರೆಮಾಚಲು ಪ್ರಯತ್ನಿಸಿತು. ತನ್ನದೇ ನೆಲದಲ್ಲಿ ತನ್ನ ಆಟಗಾರರೇ ಅಪಮಾನ ಎದುರಿಸಿದರೂ ಸಿಎಂ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಆ ಸಂದರ್ಭದಲ್ಲಿ, ಮಂಡಳಿಗೆ ಸ್ವಾಭಿಮಾನಕ್ಕಿಂತ ಹಣವೇ ಮುಖ್ಯವಾಗಿತ್ತು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಏನಿದು ಪ್ರಕರಣ? 2007-08ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ನಡೆದ ಪ್ರಕರಣವಿದು. ಸಿಡ್ನಿಯಲ್ಲಿ ನಡೆದ ಪಂದ್ಯದ ವೇಳೆ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್, ಆಸೀಸ್‌ನ ಆ್ಯಂಡ್ರೂ ಸೈಮಂಡ್ಸ್ ಅವರ ಮೇಲೆ ಜನಾಂಗೀಯ ನಿಂದನೆ ಮಾಡಿದ್ದರೆಂಬ ಟೀಕೆ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com