ಚೆನ್ನೈ: ನಟಿ-ರಾಜಕಾರಣಿ ಖುಷ್ಬೂ ಕಾಂಗ್ರೆಸ್ ಸೇರಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇಂದು ಸಂಜೆ ವಿದ್ಯುಕ್ತವಾಗಿ ಘೋಷಣೆ ಹೊರಬೀಳಲಿದೆ ಎಂದು ನಂಬಲಾಗಿದೆ.
ಎಂ ಕರುಣಾನಿಧಿ ಮುಖಂಡತ್ವದ ಡಿಎಂಕೆ ಪಕ್ಷವನ್ನು ಜೂನ್ ನಲ್ಲಿ ಖುಷ್ಬೂ ತೊರೆದಿದ್ದರು. ತಮಿಳುನಾಡಿನಲ್ಲಿ ೨೦೧೦ ರಲ್ಲಿ ಪಕ್ಷ ಅಧಿಕಾರದಲ್ಲಿದ್ದಾಗ ಪಕ್ಷ ಸೇರಿದ್ದ ಅವರು, ತಾವು ಪಕ್ಷದಿಂದ ಹೊರಬರುತ್ತಿದ್ದುದನ್ನು ಘೋಷಿಸಿದ್ದ ಸಮಯದಲ್ಲಿ "ಡಿಎಂಕೆ ಪಕ್ಷಕ್ಕೆ ಕಷ್ಟ ಪಟ್ಟು ದುಡಿದಿದ್ದೆಲ್ಲಾ ವ್ಯರ್ಥ" ಎಂದು ಬಣ್ಣಿಸಿದ್ದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬರೀ ವೀಕ್ಷಕನಾಗಿತ್ತು. ಮೇ ನಲ್ಲಿ ನಡೆದ ಈ ಚುನಾವಣೆಗಳಲ್ಲಿ ಒಂದು ಸ್ಥಾನವನ್ನೂ ಗೆಲ್ಲದೆ ಕಾಂಗ್ರೆಸ್ ದಯನೀಯ ಪ್ರದರ್ಶನ ತೋರಿತ್ತು. ಜೆ ಜಯಲಲಿತಾ ನಾಯಕತ್ವದ ಆಳುತ್ತಿರುವ ಎ ಐ ಡಿ ಎಂ ಕೆ ಪಕ್ಷ ೨ ಸ್ಥಾನಗಳನ್ನು ಬಿಟ್ಟು ಬೇರೆಲ್ಲಾ ಸ್ಥಾನಗಳಲ್ಲೂ ಜಯಗಳಿಸಿತ್ತು.
ಕಳೆದ ೨೦೧೧ ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಕೇವಲ ಐದು ಸ್ಥಾನಗಳನ್ನು ಗಳಿಸಿತ್ತು. ಇತ್ತೀಚೆಗಷ್ಟೆ ತಮಿಳುನಾಡಿನ ಕಾಂಗ್ರೆಸ್ ಪಕ್ಷದಲ್ಲಿ ಒಡಕು ಮೂಡಿ ಮಾಜಿ ಕೇಂದ್ರ ಸಚಿವ ಜಿ ಕೆ ವಾಸನ್ ಕಾಂಗ್ರೆಸ್ ನಿಂದ ಹೊರ ಬಂದು ಹೊಸ ಪಕ್ಷದ ಘೋಷಣೆ ಮಾಡಿದ್ದರು.
Advertisement