ಗಲ್ಲಿರಲಿ ಎಂದ ಭಾರತ

ಮರಣದಂಡನೆಯನ್ನು ರದ್ದು ಮಾಡಬೇಕೆನ್ನುವ ವಿಶ್ವಸಂಸ್ಥೆಯ ಕರಜು...
ಗಲ್ಲಿರಲಿ ಎಂದ ಭಾರತ

ವಿಶ್ವಸಂಸ್ಥೆ: ಮರಣದಂಡನೆಯನ್ನು ರದ್ದು ಮಾಡಬೇಕೆನ್ನುವ ವಿಶ್ವಸಂಸ್ಥೆಯ ಕರಜು ನಿರ್ಣಯಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಮಂಡನೆಯಾದ ಮರಣದಂಡನೆಯನ್ನು ತೆಗೆದು ಹಾಕಬೇಕೆನ್ನುವ ನಿರ್ಣಯದ ವಿರುದ್ಧ ಭಾರತ ಮತಹಾಕಿದೆ.

ಪ್ರತಿಯೊಂದು ದೇಶವೂ ತನ್ನದೇ ಆದ ಕಾನೂನು ವ್ಯವಸ್ಥೆಯನ್ನು ರೂಪಿಸುವ ಮತ್ತು ಅಪರಾಧಿಗಳನ್ನು ಶಿಕ್ಷಿಸುವ ಸಾರ್ವಭೌಮ ಹಕ್ಕನ್ನು ಹೊಂದಿದೆ. ಈ ನಿರ್ಣಯ ಈ ಮೂಲಭೂತ ಹಕ್ಕನ್ನು ಗುರಿತಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದೆ.

ವಿಶ್ವಸಂಸ್ಥೆಯಲ್ಲಿ ಮಂಡನೆಯಾದ ಈ ನಿರ್ಣಯದ ಪರ 144 ದೇಶಗಳು ಹಾಗೂ 36 ದೇಶಗಳು ವಿರುದ್ಧ ಮತಹಾಕಿವೆ. ಇನ್ನು 34 ದೇಶಗಳು ಈ ವಿಚಾರಕ್ಕೆ ಸಂಬಂಧಿಸಿ ತಟಸ್ಥ ನಿಲುವು ಪ್ರಕಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com