ಮರ್ಯಾದೆ ಹತ್ಯೆ: ತಂಗಿ, ಭಾವನನ್ನೇ ಕೊಂದ ಬಾಮೈದ

ಮರ್ಯಾದೆ ಹತ್ಯೆ
ಮರ್ಯಾದೆ ಹತ್ಯೆ

ಹಪುರ್: ಉತ್ತರಪ್ರದೇಶ ಹಾಪುರ್‌ನಲ್ಲಿ ಮರ್ಯಾದೆ ಹತ್ಯೆ ನಡೆದಿದೆ. ಪಂಚಾಯ್ತಿ ಆದೇಶ ಉಲ್ಲಂಘಿಸಿದಕ್ಕಾಗಿ ದಲಿತ ಯುವಕ ಹಾಗೂ ಆತನ ಮುಸ್ಲಿಂ ಪತ್ನಿಯನ್ನು ಕೊಂದು ಹಾಕಲಾಗಿದೆ.

ಪ್ರತ್ಯೇಕವಾಗಿ ವಾಸಿಸಬೇಕೆನ್ನುವ ಪಂಚಾಯತ್‌ನ ಸೂಚನೆಯನ್ನು ದಂಪತಿ ಧಿಕ್ಕರಿಸಿದ್ದಕ್ಕೆ ಯುವತಿಯ ಸಹೋದರನೇ ಈ ಹತ್ಯೆ ಮಾಡಿದ್ದಾನೆ.

ಪರಸ್ಪರ ಪ್ರೀತಿಸುತ್ತಿದ್ದ ಕರಕುಶಲ ಕೆಲಸಗಾರ ಸೋನು ಹಾಗೂ ದನಿಷ್ಟ ಬೇಗಂ 4 ತಿಂಗಳ ಹಿಂದೆ ವಿವಾಹವಾಗಿದ್ದರು. ಬಳಿಕ ಯುವತಿ ಗಂಡನ ಗ್ರಾಮವಾದ ಫತೇಪುರ್ ಗ್ರಾಮದಲ್ಲೇ ನೆಲೆಸಿದ್ದಳು.

ಆದರೆ, ಮದುವೆ ಆಗಿದ್ದಕ್ಕೆ ಸಾಕ್ಷಿ ಇಲ್ಲ ಎಂದು ಹೇಳಿ ಯುವತಿಯ ಕುಟುಂಬ ಪಂಚಾಯತ್‌ನ ಮೊರೆ ಹೋಗಿತ್ತು. ಪಂಚಾಯತ್ ಸೂಚನೆಯಂತೆ ದನಿಷ್ಟಳನ್ನು ಆಕೆಯ ಕುಟುಂಬ ಮನೆಗೆ ಕರೆದೊಯ್ದು ಕೂಡಿ ಹಾಕಿತ್ತು. ಇಷ್ಟಾದರೂ ಆಕೆ ಗಂಡನನ್ನು ಭೇಟಿಯಾಗಲು ತೆರಳಿದ್ದಳು. ಕೋಪೋದ್ರಿಕ್ತನಾದ ಯುವತಿ ಸಹೋದರ ಆಕೆಯ ಗಂಡನ ಮೇಲೆ ನಡುಬೀದಿಯಲ್ಲೇ ತಲವಾರ್‌ನಿಂದ ಕಡಿದು ಹತ್ಯೆ ಮಾಡಿದ್ದಾನೆ. ಆಗ ಮಧ್ಯಪ್ರವೇಶಿಸಿದ ಸಹೋದರಿಯ ಕುತ್ತಿಗೆಯನ್ನೂ ಸೀಳಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com