ಯುದ್ಧ ಸ್ಥಿತಿಯಲ್ಲೂ ಭಾರತೀಯರ ರಕ್ಷಣೆ

ಯೆಮೆನ್‍ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸುವ `ಆಪರೇಷನ್ ರಾಹತ್' ಯುದ್ಧದೋಪಾದಿಯಲ್ಲಿ ನಡೆಯುತ್ತಿದೆ.
ಭಾರತೀಯರ ರಕ್ಷಣೆ
ಭಾರತೀಯರ ರಕ್ಷಣೆ
Updated on

ನವದೆಹಲಿ: ಯೆಮೆನ್‍ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸುವ `ಆಪರೇಷನ್ ರಾಹತ್' ಯುದ್ಧದೋಪಾದಿಯಲ್ಲಿ ನಡೆಯುತ್ತಿದೆ. ಆದರೆ ಆ್ಯಡೆನ್ ಬಂದರು ಸಮೀಪ ಭೀಕರ ಕಾಳಗ ನಡೆಯುತ್ತಿದೆ. ಹೀಗಿದ್ದರೂ ಅಲ್ಲಿಂದ ಭಾರತೀಯರನ್ನು ಸಾಹಸದಿಂದ ರಕ್ಷಿಸಲಾಗಿದೆ.

ರಕ್ಷಣಾ ಕಾರ್ಯಕ್ಕಾಗಿ ಕಳುಹಿಸಲಾಗಿರುವ ಯುದ್ಧ ನೌಕೆ ಐಎನ್‍ಎಸ್ ಮುಂಬೈಗೆ ಆ್ಯಡೆನ್ ಬಂದರು ಪ್ರವೇಶಕ್ಕೆ ಬಂಡುಕೋರರ ಶೆಲ್ ದಾಳಿ ಅಡ್ಡಿಯಾಗಿದೆ. ಈ ನೌಕೆಯಲ್ಲಿ ಹೆಚ್ಚುವರಿಯಾಗಿ 12 ಸಣ್ಣ ಪ್ರಮಾಣದ ದೋಣಿಗಳನ್ನು ಜೋಡಿಸಲಾಗಿದೆ.

ಈ ಮೂಲಕ ತಂತ್ರಬದ್ಧವಾಗಿ ಭಾರತೀಯರನ್ನು ಪಾರು ಮಾಡುವ ಯೋಜನೆ ರೂಪಿಸಿದೆ ನೌಕಾಪಡೆ. ಈವರೆಗೆ 1,350 ಮಂದಿಯನ್ನು ಸ್ವದೇಶಕ್ಕೆ ಕರೆತರಲಾಗಿದೆ. ಇದೇ ವೇಳೆ ಯೆಮೆನ್ ಕಾಳಗದಲ್ಲಿ ಖೈದಾ ಹಿಡಿತ ಬಲ ಗೊಳ್ಳುತ್ತಿರುವುದರಿಂದ ಪರಿಸ್ಥಿತಿ ಭೀಕರವಾಗಿದೆ ಎಂದು ನೌಕಾಪಡೆ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.




Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com