ನೈನಿತಾಲ್: ಕೋತಿ ಅಥವಾ ನಾಯಿ ದಾಳಿಗೆ ಒಳಗಾದವರಿಗೆ ಸರ್ಕಾರ 2 ಲಕ್ಷ ರುಪಾಯಿ ಪರಿಹಾರ ನೀಡಬೇಕೆಂದು ಉತ್ತರಾಖಂಡ್ ಹೈಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ.
ನಾಯಿ ಅಥವಾ ಕೋತಿ ದಾಳಿಗೆ ಒಳಗಾದ ವಾರದೊಳಗೆ ಜಿಲ್ಲಾ ಜಿಲ್ಲಾ ಮುನ್ಸಿಪಲ್ ಕಾರ್ಪೋರೇಶನ್ ಮತ್ತು ಸರ್ಕಾರ ಸೇರಿ ಪೀಡಿತರಿಗೆ ಪರಿಹಾರವನ್ನು ಒದಗಿಸಬೇಕು ಎಂದು ನ್ಯಾಯಮೂರ್ತಿ ಅಲೋಕ್ ಸಿಂಗ್ ಮತ್ತು ಸರ್ವೇಶ್ ಕುಮಾರ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿದೆ.
ನೈನಿತಾಲ್ನಲ್ಲ ಬೀದಿನಾಯಿಗಳ ಹಾವಳಿ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು ಜನವರಿ ತಿಂಗಳೊಂದರಲ್ಲೇ 4000 ಮಂದಿಗೆ ನಾಯಿ ಕಡಿದ ವರದಿಯಾಗಿತ್ತು.
ಈ ಹಿನ್ನಲೆಯಲ್ಲಿ ನಾಯಿ ಮತ್ತು ಕೋತಿ ದಾಳಿಗೆ ತುತ್ತಾದ ಜನ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ನೀಡಿದೆ. ಅಲ್ಲದೇ, ಬೀಡಾದಿ ದನಗಳ ದಾಳಿಗೊಳಗಾದವರಿಗೂ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
Advertisement