ಚೆನ್ನೈ: ತಮಿಳುನಾಡು ಮೂಲದ 20 ಮರಗಳ್ಳರ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದು, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಒಡೆತನದ ಹೆರಿಟೇಜ್ ಫ್ರೆಶ್ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದಾರೆ.
ಚೆನ್ನೈನ ಐನಾವರಂನಲ್ಲಿರುವ ನಾಯ್ಡು ಅವರ ಹೆರಿಟೇಜ್ ಫ್ರೆಶ್ ಮೇಲೆ ಇಂದು ಬೆಳಗ್ಗೆ ಐವರು ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದಾರೆ. ಈ ದಾಳಿ ವೇಳೆ ಮಳಿಗೆ ಮುಚ್ಚಿದ್ದರಿಂದ ಹೆಚ್ಚು ಹಾನಿ ಸಂಭವಿಸಿಲ್ಲ. ಅಂಗಡಿ ಮುಂಗಟ್ಟು ಹಾಗೂ ಎರಡು ಕಿಟಕಿ ಗಾಜುಗಳು ಒಡೆದಿದೆ. ಸದ್ಯ ದಾಳಿಯನ್ನು ತಾವೇ ಮಾಡಿರುವುದಾಗಿ ನಾನ್ ತಮಿಳರ್ ಪಕ್ಷದ ಸದಸ್ಯರು ಒಪ್ಪಿಕೊಂಡಿದ್ದು, ಸದ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರದ ಚಿತ್ತೂರು ಜಿಲ್ಲೆಯ ತಿರುಪತಿ ಸಮೀಪದ ಶೇಷಾಚಲಂ ಅರಣ್ಯದಲ್ಲಿ ತಮಿಳುನಾಡು ಮೂಲದ 20 ಮಂದಿ ಮರಗಳ್ಳರನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು. ಇದರಿಂದಾಗಿ ತಮಿಳುನಾಡಿನಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ.
Advertisement