ನವದೆಹಲಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರುವ ರಾಜ್ಯಗಳಿಗೆ ನೀಡುವ ಪ್ರಶಸ್ತಿಗೆ ಕರ್ನಾಟಕ ಭಾಜನವಾಗಿದೆ.
ಏ.24ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಪಂಚಾಯತ್ ದಿನದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಪ್ರದಾನ ಮಾಡಲಿದ್ದಾರೆ.
ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರುವ ರಾಜ್ಯಗಳನ್ನು, ಪಂಚಾಯತ್ ರಾಜ್ ಯೋಜನೆಗಳಲ್ಲಿ ಉತ್ತಮ ಚಟುವಟಿಕೆ ತೋರುವ ರಾಜ್ಯಗಳನ್ನು ಗುರುತಿಸಿ ಈ ಪ್ರಮಾಣ ಪ್ರಶಸ್ತಿ ನೀಡಲಾಗುತ್ತಿದ್ದು, ರಾಜ್ಯ ಸರ್ವ ಶಿಕ್ಷಣ ಅಭಿಯಾನ, ಗ್ರಾಮೀಣ ಆರೋಗ್ಯ ಯೋಜನೆ, ಸಾಕ್ಷರ ಭಾರತ ಅಭಿಯಾನ, ಕೃಷಿ ವಿಕಾಸ ಯೋಜನೆ ಎಲ್ಲದರಲ್ಲೂ ಅತ್ಯುತ್ತಮ ಸಾಧನೆ ತೋರಿರುವುದನ್ನು ಕೇಂದ್ರ ಗುರುತಿಸಿದೆ.
Advertisement