ಢಾಕಾ: ಭಾರತದ ಆರ್ಥಿಕತೆಗೆ ಹೊಡೆತ ನೀಡಲು ಪಾಕಿಸ್ತಾನ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವುದು ಸ್ಪಷ್ಟ ವಾಗಿದೆ.
ಭಾರತದ ನಕಲಿ ನೋಟುಗಳ ಮುದ್ರಣದಲ್ಲಿ ಪಾಕಿಸ್ತಾನದ ಕೈವಾಡವಿರುವ ಅಂಶ ಬೆಳಕಿಗೆ ಬಂದಿದೆ. ಬಾಂಗ್ಲಾದ ಢಾಕಾ ವಿಮಾನ ನಿಲ್ದಾಣದಲ್ಲಿ ಮೊಹ ಮ್ಮದ್ ಸಜ್ಜದ್ ಹುಸೈನ್ ಎಂಬಾತ ಸೆರೆಸಿಕ್ಕಿದ್ದು, ಈತ ನಿಂದ ರು.2.5 ಕೋಟಿ ಮೌಲ್ಯದ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.
ಹುಸೈನ್ ಪಾಕಿಸ್ತಾನದ ಕರಾಚಿಯಿಂದ ದೋಹಾಗೆ ತೆರಳಿ, ಅಲ್ಲಿಂದ ಢಾಕಾಗೆ ವಿಮಾನ ಹತ್ತಿದ್ದ ಎಂಬ ವಿಚಾರ ಬಾಂಗ್ಲಾ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಪಾಕಿಸ್ತಾನ ಹೈ ಕಮಿಷನ್ ಈತ ನಿಗೆ ಹಲವು ಬಾರಿ ವೀಸಾ ನೀಡಿರುವುದೂ ಗೊತ್ತಾಗಿದೆ. ನಕಲಿ ನೋಟುಗಳನ್ನು ಬಾಂಗ್ಲಾ ಮತ್ತು ನೇಪಾಳದ ಮೂಲಕವೇ ಭಾರತಕ್ಕೆ ರವಾನಿಸಲಾಗುತ್ತದೆ. ಸ್ಮಗ್ಲರ್ಗಳು ಸೂಕ್ತ ಸಮಯಕ್ಕಾಗಿ ಕಾದು, ಭಾರತ ಪ್ರವೇಶಿಸಿ ವಿವಿಧ ನಗರಗಳಲ್ಲಿರುವ ಏಜೆಂಟ್ಗಳಿಗೆ ನಕಲಿ ನೋಟುಗಳನ್ನು ವಿತರಿಸುತ್ತಾರೆ.
Advertisement