ಭೂಸ್ವಾಧೀನ ಮಸೂದೆ ವರದಿ ಸಲ್ಲಿಕೆ ಅವಧಿ ವಿಸ್ತರಣೆ

ಕೇಂದ್ರ ಎನ್ ಡಿಎ ಸರ್ಕಾರದ ಬಹುವಿವಾದಿತ ಭೂ ಸ್ವಾಧೀನ ಮಸೂದೆಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿರುವ ಜಂಟಿ ಸದನ ಸಮಿತಿ ಸಮೀಕ್ಷೆಯ ವರದಿ ನೀಡಲು ...
ಸಂಸತ್
ಸಂಸತ್
Updated on

ನವದೆಹಲಿ: ಕೇಂದ್ರ ಎನ್ ಡಿಎ ಸರ್ಕಾರದ ಬಹುವಿವಾದಿತ ಭೂ ಸ್ವಾಧೀನ ಮಸೂದೆಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿರುವ ಜಂಟಿ ಸದನ ಸಮಿತಿ ಸಮೀಕ್ಷೆಯ ವರದಿ ನೀಡಲು ನಾಲ್ಕು ದಿನಗಳ ಅವಧಿ ವಿಸ್ತರಿಸಲಾಗಿದೆ.

ಸಂಸತ್ತಿನ ಜಂಟಿ ಸದನ ಸಮಿತಿ ಇತ್ತೀಚೆಗೆ ನಡೆದ ಸಭೆಯಲ್ಲಿ ವರದಿ ನೀಡಲು ಎರಡು ದಿನಗಳ ಹೆಚ್ಚಿನ ಕಾಲಾವಾಕಾಶ ನೀಡುವಂತೆ ಕೋರಿತ್ತು. ಅದರಂತೆ ಸರ್ಕಾರ ಭೂ ಸ್ವಾಧೀನ ಮಸೂದೆ ಅಧ್ಯಯನ ವರದಿ ವರದಿ ಸಲ್ಲಿಸಲು ಆಗಸ್ಚ್ 7ರ ವರೆಗೆ ಗಡುವು ನೀಡಿದೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲಲಿತ್ ಮೋದಿ ಹಾಗೂ ವ್ಯಾಪಂ ಹಗರಣ ಸಂಬಂಧ ಪ್ರತಿ ಪಕ್ಷಗಳು ಕೋಲಾಹಲ ಸೃಷ್ಠಸಿದ್ದು ಸದನ ನಡೆಯಲು ಅವಕಾಶ ನೀಡುತ್ತಿಲ್ಲ.ಹೀಗಾಗಿ ಜಂಟಿ ಸದನ ಸಮಿತಿ ಹೆಚ್ಚುವರಿ ಕಾಲಾವಾಕಾಶ ಕೋರಿದೆ. ಈ ಮೊದಲು ಆಗಸ್ಟ್ 3 ರೊಳಗೆ ಅಧ್ಯಯನ ವರದಿ ನೀಡುವಂತೆ ಸೂಚಿಸಲಾಗಿತ್ತು. ಭೂ ಸ್ವಾದೀನ ದಿಂದಾಗುವ ರೈತರಿಗೆ ಆಗುವ ಒಳಿತು ಕೆಡುಕು, ಪಾರದರ್ಶಕವಾಗಿ ನೀಡುವ ಪರಿಹಾರ, ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಂಸದೀಯಸಮಿತಿ ಅಧ್ಯಯನ ನಡೆಸಿ ವರದಿ ಸಿದ್ದಪಡಿಸಿದೆ.






Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com