ಮಾಟಕ್ಕಾಗಿ ಮಗುವಿನ ರುಂಡ ಕಡಿದ ಮಾಂತ್ರಿಕನಿಗೆ ಮರಣದಂಡನೆ ನೀಡಿದ ನ್ಯಾಯಾಲಯ

ಮಗುವಿನ ರುಂಡ ಕಡಿದು ಮಾಟಮಂತ್ರ ಮಾಡುತ್ತಿದ್ದ ಸ್ವಯಂಘೋಷಿತ ಮಾಂತ್ರಿಕನೊಬ್ಬನಿಗೆ ಒಡಿಶಾದ ಸ್ಥಳೀಯ ನ್ಯಾಯಾಲಯವೊಂದು ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿದೆ...
ಮಾಟಕ್ಕಾಗಿ ಮಗುವಿನ ರುಂಡ ಕಡಿದ ಮಾಂತ್ರಿಕನಿಗೆ ಮರದಂಡನೆ ನೀಡಿದ ನ್ಯಾಯಾಲಯ (ಸಾಂದರ್ಭಿಕ ಚಿತ್ರ)
ಮಾಟಕ್ಕಾಗಿ ಮಗುವಿನ ರುಂಡ ಕಡಿದ ಮಾಂತ್ರಿಕನಿಗೆ ಮರದಂಡನೆ ನೀಡಿದ ನ್ಯಾಯಾಲಯ (ಸಾಂದರ್ಭಿಕ ಚಿತ್ರ)
Updated on

ಜೈಪುರ: ಮಗುವಿನ ರುಂಡ ಕಡಿದು ಮಾಟಮಂತ್ರ ಮಾಡುತ್ತಿದ್ದ ಸ್ವಯಂಘೋಷಿತ ಮಾಂತ್ರಿಕನೊಬ್ಬನಿಗೆ ಒಡಿಶಾದ ಸ್ಥಳೀಯ ನ್ಯಾಯಾಲಯವೊಂದು ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

ಈ ಕುರಿತಂತೆ ಇಂದು ಆದೇಶ ಹೊರಡಿಸಿರುವ ನ್ಯಾಯಮೂರ್ತಿ ಜೀವನ್ ಬಲ್ಲಾವ್ ಅವರಿದ್ದ ಪೀಠ, ಪ್ರಕರಣ ಸಂಬಂಧ ಮಾಂತ್ರಿಕ ಆರೋಪಿ ಪಿತಾಂಬರ್ ಗೈಪೈ ವಿರುದ್ಧ 22 ಸಾಕ್ಷ್ಯಾಧಾರಗಳು ದೊರಕಿದ್ದು, ಮಾಟಮಂತ್ರಕ್ಕಾಗಿ ಮಗುವಿನ ಹತ್ಯೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಮರಣದಂಡನೆ ವಿಧಿಸಿದೆ.

ಶ್ರೀಕಾಂತ್ ಬಾಗ್ ಹತ್ಯೆಗೀಡಾದ ಬಾಲಕನಾಗಿದ್ದು, 2010ರ ಫೆ.11 ರಂದು ಚಾಕೋಲೇಟ್ ನೀಡುವ ನೆಪದಲ್ಲಿ ಮಗುವನ್ನು ಕರೆದೊಯ್ದ ಮಾಂತ್ರಿಕ ತನ್ನ ಕೈಯಲ್ಲಿದ್ದ ಮಾರಾಕಾಸ್ತ್ರದಿಂದ ಮಗುವಿನ ರುಂಡವನ್ನು ಕತ್ತರಿಸಿ ದೇಹವನ್ನು ಅಲ್ಲೇ ಬಿಟ್ಟು ತಲೆಯನ್ನು ತೆಗೆದುಕೊಂಡು ಹೋಗಿದ್ದಾನೆ. ನಂತರ ತನ್ನ ಮಾಟಮಂತ್ರಕ್ಕಾಗಿ ಮಗುವಿನ ರುಂಡ ಬಳಸಿಕೊಂಡಿದ್ದಾನೆ. ಮಗು ಕಾಣೆಯಾಗಿರುವ ಕುರಿತಂತೆ ಗಾಬರಿಯಾದ ಪೋಷಕರು ದಾಮೋದರ್ ಪುರದಲ್ಲಿರುವ ಸುಕಿಂದಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರಿಗೆ ರುಂಡವಿಲ್ಲದ ಮಗುವಿನ ದೇಹ ಪತ್ತೆಯಾಗಿದೆ. ಇದರಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಸುತ್ತಮುತ್ತ ಹಳ್ಳಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇದೇ ಹಳ್ಳಿಗೆ ಹತ್ತಿದಲ್ಲಿದ್ದ ಇಚ್ಛಾನಗರ್ಪಾಟ್ನ ಎಂಬ ಹಳ್ಳಿಯಲ್ಲಿ ತನಿಖೆ ನಡೆಸಿದಾಗ ಫೆ.17 ರಂದು ಮಾಟಮಂತ್ರ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮನೆಯಲ್ಲಿ ಮಗುವಿನ ರುಂಡ ಪತ್ತೆಯಾಗಿದೆ. ನಂತರ ಪ್ರಕರಣ ಸಂಬಂಧ ಮಾಂತ್ರಿಕನನ್ನು ಪೊಲೀಸರು ಬಂಧನಕ್ಕೊಳಪಡಿಸಿದ ಪೊಲೀಸರು ವಿಚಾರಣೆ ನಡೆಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com