ಶ್ರೀಮದ್ ಸಾರಥಿ ದೇವ್
ದೇಶ
ಮಹಿಳೆ ಜೊತೆ ಚಕ್ಕಂದವಾಡಿ ತಲೆಮರೆಸಿಕೊಂಡಿದ್ದ ಬಾಬಾ ಬಂಧನ
ಹೋಟೆಲ್ ಒಂದರಲ್ಲಿ ಮಹಿಳೆ ಜೊತೆ ಚಕ್ಕಂದವಾಡಿ ತಲೆಮರೆಸಿಕೊಂಡಿದ್ದ ಒಡಿಶಾದ ಅಧ್ಯಾತ್ಮ ಗುರು ಶ್ರೀಮದ್...
ಭುವನೇಶ್ವರ್: ಹೋಟೆಲ್ ಒಂದರಲ್ಲಿ ಮಹಿಳೆ ಜೊತೆ ಚಕ್ಕಂದವಾಡಿ ತಲೆಮರೆಸಿಕೊಂಡಿದ್ದ ಒಡಿಶಾದ ಅಧ್ಯಾತ್ಮ ಗುರು ಶ್ರೀಮದ್ ಸಾರಥಿ ಅವರನ್ನು ಶನಿವಾರ ಒಡಿಶಾ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ನ ಹೋಟೆಲ್ ಒಂದರಲ್ಲಿ ಸ್ವಯಂ ಘೋಷಿತ ಅಧ್ಯಾತ್ಮ ಗುರು ಶ್ರೀಮದ್ ಸಾರಥಿ ದೇವ್ ಬಾಬಾ ಮಹಿಳೆಯೊಬ್ಬಳ ಜತೆ ಇದ್ದ ದೃಶ್ಯಗಳು ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಭಕ್ತರು ಬರಿಮುಲ್ಲಾದಲ್ಲಿನ ಸಾರಥಿ ದೇವ್ ಆಶ್ರಮದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಬಾಬಾ ಪರಾರಿಯಾಗಿ ತಲೆಮರೆಸಿಕೊಂಡಿದ್ದನು.
ಬಾಬಾ ಸಾರಥಿ ದೇವ್, ತನ್ನ ಜೊತೆಗಿದ್ದ ಮಹಿಳೆಯನ್ನು ಹೊಟೇಲ್ನ ನೋಂದಣಿಯಲ್ಲಿ ಪತ್ನಿ ಎಂದು ದಾಖಲಿಸಿದ್ದಾನೆ ಎಂದು ಹೇಳಲಾಗಿದ್ದು, ಈ ಕುರಿತಂತೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸಿಐಡಿ ತನಿಖೆಗೆ ಆದೇಶಿಸಿದ್ದರು. ಶುಕ್ರವಾರ ಒಡಿಶಾ ಪೊಲೀಸರು ಬಾಬಾನನ್ನು ಬಂಧಿಸಲಾಗಿದ್ದು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ