ಸಂಭಾವ್ಯ ದುರಂತ ತಪ್ಪಿಸಿದ ಭಾರತೀಯ ಸೇನೆ

ಜಮ್ಮು-ಕಾಶ್ಮೀರದಲ್ಲಿ ಸಂಭವಿಸಬೇಕುದ್ದ ದೊಡ್ಡ ದುರಂತವನ್ನು ಭಾರತೀಯ ಸೇನೆ ತಡೆದಿದೆ.
ಭಾರತೀಯ ಸೇನೆ(ಸಾಂಕೇತಿಕ ಚಿತ್ರ)
ಭಾರತೀಯ ಸೇನೆ(ಸಾಂಕೇತಿಕ ಚಿತ್ರ)
Updated on

ಕುಲಗಾಮ್: ಜಮ್ಮು-ಕಾಶ್ಮೀರದಲ್ಲಿ ಸಂಭವಿಸಬೇಕಿದ್ದ ದೊಡ್ಡ ದುರಂತವನ್ನು ಭಾರತೀಯ ಸೇನೆ ತಡೆದಿದೆ.

ಕುಲಗಾಮ್ ​ಜಿಲ್ಲೆಯ ಸರ್ಕಾರಿ ಶಾಲೆಯ ಬಳಿ ಇಡಲಾಗಿದ್ದ ಸುಧಾರಿತ ಸ್ಫೋಟಕ ಸಾಧನವನ್ನು ಪತ್ತೆ ಹಚ್ಚಿರುವ ಸೇನೆ, ಅದನ್ನು ನಿಷ್ಕ್ರಿಯಗೊಳಿಸಿದೆ. ಎಎನ್ಐ ವರದಿಯ ಪ್ರಕಾರ,  ಸೇನಾ ಗಸ್ತು ಪಡೆಯ ಸದಸ್ಯರು ಶಾಲೆಯ ಬಳಿ ಐಇಡಿಯನ್ನು ಪತ್ತೆ ಹಚ್ಚಿದ್ದಾರೆ.

ತಕ್ಷಣವೇ ಪೊಲೀಸ್ ಠಾಣೆಗೆ ಸೇನಾ ಸಿಬ್ಬಂದಿಗಳು ವಿಷಯ ತಿಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಐಇಡಿಯನ್ನು ನಿಷ್ಕ್ರಿಯಗೊಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com