ಇಂದೊರ್: 2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಯಾವತ್ತು 'ಅಚ್ಚೆದಿನ್'ದಿನದ ಭರವಸೆ ನೀಡಿಲ್ಲ ಮತ್ತು ಅದು ಪಕ್ಷದ ಘೋಷಣೆಯಾಗಿರಲಿಲ್ಲ ಎಂದು ಕೇಂದ್ರ ಕಬ್ಬಿಣ ಮತ್ತು ಗಣಿ ಸಚಿವ ನರೇಂದ್ರ ತೋಮರ್ ಅವರು ಹೇಳಿದ್ದಾರೆ.
'ಇನ್ನು ಮುಂದೆ ಒಳ್ಳೆಯ ದಿನಗಳು ಬರುತ್ತವೆ(ಅಚ್ಚೆದಿನ್) ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮನೆಗೆ ಹೋಗುತ್ತಾರೆ' ಎಂಬುದು ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬಂದ ಬಂದ ಮಾತು. ಮಾನವೀಯತೆ ದೃಷ್ಟಿಯಿಂದ ನಾವು ಅದನ್ನು ಒಪ್ಪಿಕೊಂಡವು. ಆದರೆ ಯಾವುತ್ತು ಅದು ನಮ್ಮ ಪಕ್ಷದ ಘೋಷಣೆಯಾಗಲಿಲ್ಲ ಎಂದು ತೋಮರ್ ತಿಳಿಸಿದ್ದಾರೆ.
ಈರುಳ್ಳಿ ಬೆಲೆ ಗಗನಕ್ಕೇರಿರುವ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ತೋಮರ್ ಈ ರೀತಿ ಉತ್ತರಿಸಿದ್ದಾರೆ.
Advertisement