ಸುಸೂತ್ರ ಕಲಾಪ ಪ್ರಧಾನಿ ಸಂತಸ

ಸಂಸತ್ ಅಧಿವೇಶನ ಸುಗಮವಾಗಿ ನಡೆಯುತ್ತಿದ್ದು, ಇದರ ಶ್ರೇಯ ಎಲ್ಲ ಪಕ್ಷಗಳಿಗೂ ಸಲ್ಲಬೇಕು ಎಂದು ಪ್ರಧಾನಿ ನರೇಂದ್ರ ಮೋದಿ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಸಂಸತ್ ಅಧಿವೇಶನ ಸುಗಮವಾಗಿ ನಡೆಯುತ್ತಿದ್ದು, ಇದರ ಶ್ರೇಯ ಎಲ್ಲ ಪಕ್ಷಗಳಿಗೂ ಸಲ್ಲಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಿದ್ದರು. ಬೆಳಗ್ಗೆ 10.15ಕ್ಕೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಬರೋಬ್ಬರಿ 40 ನಿಮಿಷ ಮಾತನಾಡಿದರು. 
ಸಂಸತ್ ಅಧಿವೇಶನ 11ಕ್ಕೆ ಆರಂಭವಾಗುವುದಿತ್ತು. ``ನಾನೀಗ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳಬೇಕಿದೆ. ಕಲಾಪ ನಡೆಯುತ್ತಿದೆ ಎನ್ನುವುದೇ ಖುಷಿಯ ಸಮಾಚಾರ'' ಎಂದಾಗ ಸಭೆಯಲ್ಲಿ ನಗು ಉಕ್ಕಿತು. ``ಮೋದಿಯಿಂದಾಗಿ ಇದು ಸಾಧ್ಯವಾದದ್ದಲ್ಲ, ಎಲ್ಲ ಪಕ್ಷಗಳಿಗೂ ಇದರ ಶ್ರೇಯ ಸಲ್ಲಬೇಕು'' ಎಂದು ಹೇಳಲು ಅವರು ಮರೆಯಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com