ಗುರ್ಗಾಂವ್: ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದಿಂದ ಟ್ರಕ್ ಡ್ರೈವರ್ ಒಬ್ಬನನ್ನು ಗೋಸಂರಕ್ಷಣಾ ಸಂಘಟನೆಯೊಂದು ಅಡ್ಡಗಟ್ಟಿ ಥಳಿಸಿದ ಘಟನೆ ಗುರುವಾರ ನಡೆದಿದೆ.
ಗಲಭೆಕೋರರು ಬಳಿಕ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದರು.ಘಟನೆಯಲ್ಲಿ ಐವರು ಗ್ರಾಮಸ್ಥರು,ಒಬ್ಬ ಪೊಲೀಸ್ ಗಾಯಗೊಂಡಿದ್ದಾರೆ. ಮೇವಾಡದಿಂದ ಅಲಿಘಡಕ್ಕೆ ಸಾಗುತ್ತಿದ್ದ ಟ್ರಕ್ನಲ್ಲಿ ಗೋಮಾಂಸ ಇದೆ ಎಂಬ ವದಂತಿ ಹಬ್ಬಿ, ಗ್ರಾಮಸ್ಥರು ಅದನ್ನು ಹೆದ್ದಾರಿಯಲ್ಲಿ ತಡೆದು ಹಾನಿಗೊಳಿಸಿದರು. ಚಾಲಕನನ್ನು ಥಳಿಸಿದರು. ಬಳಿಕ ಹೆದ್ದಾರಿ ಅಡ್ಡಗಟ್ಟಿ ಪ್ರತಿಭಟಿಸಿದ ಗಲಭೆಕೋರರು, ಪೊಲೀಸರಿಗೆ ಚಾಲಕನನ್ನು ಒಪ್ಪಿಸಿದರು. ಬಳಿಕ ಪೊಲೀಸರಿಗೆ ಕಲ್ಲೆಸೆತಕ್ಕೆ ಮುಂದಾದಾಗ ಲಾಠಿ ಚಾರ್ಜ್ ಮಾಡಿ ಅವರನ್ನು ಚದುರಿಸಲಾಯಿತು.
Advertisement