ಶಾರೂಖ್, ಅಮೀರ್, ಅಜಂ ಖಾನ್ ರಿಂದ ದೇಶಕ್ಕೆ ಕಳಂಕ: ಸಾಧ್ವಿ ಪ್ರಾಚಿ

ಶಾರೂಖ್ ಖಾನ್, ಅಮೀರ್ ಖಾನ್, ಹಾಗೂ ಸಮಾಜವಾದಿ ಪಕ್ಷದ ಅಜಂ ಖಾನ್ ಅಸಹಿಷ್ಣುತೆ ಹೇಳಿಕೆಯಿಂದ ಭಾರತದ ಘನತೆಗೆ...
ಶಾರೂಖ್ ಖಾನ್, ಅಮೀರ್ ಖಾನ್, ಅಜಂ ಖಾನ್
ಶಾರೂಖ್ ಖಾನ್, ಅಮೀರ್ ಖಾನ್, ಅಜಂ ಖಾನ್
Updated on

ನವದೆಹಲಿ: ಬಾಲಿವುಡ್ ನಟರುಗಳಾದ ಶಾರೂಖ್ ಖಾನ್, ಅಮೀರ್ ಖಾನ್, ಹಾಗೂ ಸಮಾಜವಾದಿ ಪಕ್ಷದ ಅಜಂ ಖಾನ್ ಅಸಹಿಷ್ಣುತೆ ಹೇಳಿಕೆಯಿಂದ ಭಾರತದ ಘನತೆಗೆ ಕಳಂಕವಾಗುತ್ತಿದೆ ಎಂದು ವಿಎಚ್ ಪಿ ನಾಯಕಿ  ಸಾಧ್ವಿ ಪ್ರಾಚಿ ಆರೋಪಿಸಿದ್ದಾರೆ.

ದೇಶದಲ್ಲಿ ಸಹಿಷ್ಣುತೆ ಇದೆ. ಅಸಹಿಷ್ಣುತೆ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ದೇಶದ ವರ್ಚಸ್ಸಿಗೆ ಕೆಟ್ಟ ಹೆಸರು ತರುವ ಪ್ರಯತ್ನವಾಗಿದೆ. ಪ್ರಶಸ್ತಿ ಹಿಂತಿರುಗಿಸುತ್ತಿರುವವರು ದೇಶದ್ರೋಹಿಗಳು ಎಂದು ಆರೋಪಿಸಿದ್ದಾರೆ.

ಶಾರೂಖ್ ಖಾನ್, ಆಮೀರ್ ಖಾನ್, ಹಾಗೂ ಅಜಂ ಖಾನ್ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆಗೂಡಿದ್ದಾರೆ ಎಂದು ಆರೋಪಿಸಿದ ಅವರು, ದಾದ್ರಿ ಪ್ರಕರಣದ ಬಗ್ಗೆ ಸಮರ್ಥಿಸಿಕೊಂಡು, ಹಿಂದೂಗಳು ಎಲ್ಲಿಯೂ ಯಾವತ್ತೂ, ಗಲಭೆ ದೊಂಬಿ ಮಾಡುವುದಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com