ಪ್ರಮಾಣ ಪತ್ರ: ಆಂಧ್ರಕ್ಕೆ ಹಂಚಿಕೆ ಮಾಡಿರುವ ನೀರನ್ನು ತೆಲಂಗಾಣಕ್ಕೆ ಹಂಚಿಕೆ ಮಾಡಬೇಕೆಂದು ಕರ್ನಾಟಕ, ಮಹಾರಾಷ್ಟ್ರ ಸರ್ಕಾರಗಳು ಪ್ರಮಾಣ ಪತ್ರ ಸಲ್ಲಿಸಿವೆ. ನ್ಯಾಯಾಧಿಕರಣದ 2ನೇ ಐತೀರ್ಪಿನಲ್ಲಿ ವಿಭಜನಾಪೂರ್ವ ಆಂಧ್ರಪ್ರದೇಶಕ್ಕೆ 1001 ಟಿಎಂಸಿ, ಕರ್ನಾಟಕಕ್ಕೆ 911 ಟಿಎಂಸಿ ಮತ್ತು ಮಹಾರಾಷ್ಟ್ರಕ್ಕೆ 666 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಆಂಧ್ರಪ್ರದೇಶದಿಂದ ವಿಭಜನೆಗೊಂಡ ತೆಲಂಗಾಣ ರಾಜ್ಯವು, ತನಗೆ ಹಿಂದಿನಿಂದಲೂ ಕಷ್ಣ ನದಿ ನೀರು ಹಂಚಿಕೆ ವಿಷಯದಲ್ಲಿ ಅನ್ಯಾಯವಾಗಿದೆ. ವಿಭಜನಾಪೂರ್ವದಲ್ಲಿ ಎಲ್ಲ ನೀರಾವರಿ ಯೋಜನೆಗಳು ಆಂಧ್ರ ಭಾಗದಲ್ಲೇ ಅನುಷ್ಠಾನಗೊಂಡಿದೆ. ನಮಗೆ ದಕ್ಕಬೇಕಾದ ಪಾಲು ದಕ್ಕಿಲ್ಲ. ಹೀಗಾಗಿ ನೀರಿನ ಮರು ಹಂಚಿಕೆ ನಾಲ್ಕು ರಾಜ್ಯಗಳ ನಡುವೆಯೇ ಆಗಬೇಕು ಎಂದು ಬೇಡಿಕೆ ಇಟ್ಟಿದೆ. ಆಂಧ್ರಕ್ಕೆ ನೀಡಿರುವ 1001 ಟಿಎಂಸಿ ನೀರನ್ನು ಆಂಧ್ರ-ತೆಲಂಗಾಣ ಹಂಚಿಕೊಳ್ಳಲಿ ಎಂಬುದು ಕರ್ನಾಟಕ- ಮಹಾರಾಷ್ಟ್ರದ ವಾದವಾಗಿದೆ.