ಜಲ ಪ್ರಳಯದ ವೇಳೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಸ್ಥಗಿತಗೊಳಿಸಿತ್ತು. ಇದೀಗ ಮಳೆ ನಿಂತ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಶುಚಿಗೊಳಿಸಿದಾಗ ನಾಗರಹಾವು ವಿಮಾನದ ಚಕ್ರ ಮಧ್ಯೆ ಸುರಕ್ಷಿತ ಜಾಗ ಕಂಡುಕೊಂಡಿರುವುದು ಬೆಳಕಿಗೆ ಬಂದಿದೆ. ಚಕ್ರದೆಡೆಯಲ್ಲಿದ್ದ ಹಾವನ್ನು ಹೊರಗಟ್ಟಲು ತುಂಬ ಹೊತ್ತು ಪ್ರಯತ್ನಿಸಿದ ನಂತರ ಅಧಿಕೃತರು ನಾಗರಹಾವನ್ನು ಅಲ್ಲಿಂದ ಓಡಿಸಿದ್ದಾರೆ.