ಬಿಜೆಪಿಯ ಕಮಲದ ವಿರುದ್ಧ ಅರ್ಜಿ

ಭಾರತೀಯ ಜನತಾ ಪಕ್ಷದ ಚಿಹ್ನೆಯಾದ ಕಮಲದ ಹೂವಿನ ಗುರುತನ್ನು ಅನೂರ್ಜಿತಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‍ಗೆ ಮನವಿ ಮಾಡಲಾಗಿದೆ...
ಬಿಜೆಪಿಯ ಕಮಲದ ವಿರುದ್ಧ ಅರ್ಜಿ
ಬಿಜೆಪಿಯ ಕಮಲದ ವಿರುದ್ಧ ಅರ್ಜಿ
Updated on

ನವದೆಹಲಿ: ಭಾರತೀಯ ಜನತಾ ಪಕ್ಷದ ಚಿಹ್ನೆಯಾದ ಕಮಲದ ಹೂವಿನ ಗುರುತನ್ನು ಅನೂರ್ಜಿತಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‍ಗೆ ಮನವಿ ಮಾಡಲಾಗಿದೆ.

ಕಮಲದ ಹೂವು ದೇವರ ಅಭಿವ್ಯಕ್ತಿ ಸೂಚಕವಾಗಿದ್ದು, ಚುನಾವಣಾ ಸಮಯದಲ್ಲಿ ಅದನ್ನು ಬಳಸುವುದು ಕಾನೂನುಬಾಹಿರ ಎಂಬ ಕಾರಣ ನೀಡಿ ಈ ಚಿಹ್ನೆ ಬಳಕೆಗೆ ಅವಕಾಶ ನೀಡಬೇಡಿ ಎಂದು  ಮನವಿಯಲ್ಲಿ ಕೋರಲಾಗಿದೆ. ಎನ್‍ಜಿಒವೊಂದು ಈ ಅರ್ಜಿ ಸಲ್ಲಿಸಿದ್ದು, ನ್ಯಾ. ಜಿ.ರೋಹಿಣಿ ಮತ್ತು ನ್ಯಾ.ರಾಜೀವ್ ಸಹಾಯ ಅವರನ್ನೊಳಗೊಂಡ ಪೀಠ ಇದರ ವಿಚಾರಣೆಯನ್ನು ಜ.5ಕ್ಕೆ  ನಿಗದಿಪಡಿಸಿದೆ. ಮನವಿ ಸಲ್ಲಿಸಿದವರು ಹಿಂದಿಯಲ್ಲಿ ಮಾತನಾಡಿದ್ದರಿಂದ ವಿಚಾರಣೆಯನ್ನು ಮುಂದಿನ ದಿನಾಂಕಕ್ಕೆ ನಿಗದಿಗೊಳಿಸಲಾಯಿತು ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com