2ಜಿ, ಕಲ್ಲಿದ್ದಲು ಹಗರಣ, ವ್ಯಾಪಂ ಸೇರಿದಂತೆ ಹಲವು ಬಹುಕೋಟಿ ಹಗರಣಗಳ ಕುರಿತ ಸಿಬಿಐ ತನಿಖೆಗಳು ಸುಪ್ರೀಂ ಕಣ್ಗಾವಲಿನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಿತಿಯ ಈ ಆಕ್ಷೇಪ ಮಹತ್ವ ಪಡೆದುಕೊಂಡಿದೆ. ಇದೇ ವೇಳೆ, ದೇಶದ ಹಲವೆಡೆ ಸ್ಥಾಪಿಸಿರುವ ಸಿಬಿಐ ವಿಶೇಷ ನ್ಯಾಯಾಲಯಗಳ ಔಚಿತ್ಯವನ್ನೂ ಸಮಿತಿ ಪ್ರಶ್ನಿಸಿದ್ದು, ಈ ಬೆಳವಣಿಗೆ ರಾಜ್ಯ ಪೊಲೀಸರನ್ನು ಕೇವಲ ಹೋಂಗಾರ್ಡ್ ಮಟ್ಟಕ್ಕೆ ಸೀಮಿತಗೊಳಿಸಲಿದೆ.