ತಿರುಪತಿ ಲಡ್ಡು ಕದ್ದು ಸಿಕ್ಕಿಬಿದ್ದ ಸೇವಕ ಅಮಾನತು

ವಿಶ್ವವಿಖ್ಯಾತಿಗೊಂಡಿರುವ ತಿರುಪತಿ ದೇವಾಲಯದಲ್ಲಿ 60 ಸಾವಿರಕ್ಕೂ ಹೆಚ್ಚು ಲಡ್ಡು ಕದ್ದು ಸಿಕ್ಕಿಬಿದ್ದಿರುವ ಸೇವಕನೊಬ್ಬನನ್ನು ಅಧಿಕಾರಿಗಳು ಅಮಾನತು ಮಾಡಿರುವ ಘಟನೆ ಬುಧವಾರ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ತಿರುಪತಿ: ವಿಶ್ವವಿಖ್ಯಾತಿಗೊಂಡಿರುವ ತಿರುಪತಿ ದೇವಾಲಯದಲ್ಲಿ 60 ಸಾವಿರಕ್ಕೂ ಹೆಚ್ಚು ಲಡ್ಡು ಕದ್ದು ಸಿಕ್ಕಿಬಿದ್ದಿರುವ ಸೇವಕನೊಬ್ಬನನ್ನು ಅಧಿಕಾರಿಗಳು ಅಮಾನತು ಮಾಡಿರುವ ಘಟನೆ ಬುಧವಾರ ನಡೆದಿದೆ.

ಈ ಕುರಿತಂತೆ ಮಾತನಾಡಿರುವ ಟಿಟಿಡಿ ಅಧಿಕಾರಿಯೊಬ್ಬರು, ದೇವಾಲಯಕ್ಕೆ 1 ಲಕ್ಷದಿಂದ 20 ಲಕ್ಷದವರೆಗೆ ದಾನ ನೀಡುವ ಭಕ್ತಾದಿಗಳಿಗಾಗಿ ದೇವಾಲಯ ಪ್ರತೀವರ್ಷ ಇತಿಷ್ಟು ಲಡ್ಡುಗಳೆಂದು ನೀಡುತ್ತಿರುತ್ತದೆ. ಆದರೆ, ಈ ಲಡ್ಡುಗಳು 3 ತಿಂಗಳಿನಿಂದ ಭಕ್ತಾದಿಗಳಿಗೆ ತಲುಪುತ್ತಿಲ್ಲ ಎಂಬುದು ಗಮನಕ್ಕೆ ಬಂದಿತ್ತು. ಹೀಗಾಗಿ ಈ ಬಗ್ಗೆ ಹಲವು ಅನುಮಾನಗಳು ಬಂದಿದ್ದವು.

ಇದೀಗ ದೇವಾಲಯದ ಸೇವಕನೇ ಕಳ್ಳನೆಂಬುದಾಗಿ ತಿಳಿದುಬಂದಿದ್ದು, ಈ ವರೆಗೂ ಸುಮಾರು ರು.10 ಲಕ್ಷ ಮೌಲ್ಯದ 60 ಸಾವಿರ ಲಡ್ಡುಗಳು ಅಕ್ರಮವಾಗಿ ಮಾರಾಟವಾಗಿರುವ ಬಗ್ಗೆ ಮಾಹಿತಿಗಳು ತಿಳಿದುಬಂದಿದೆ. ಹೀಗಾಗಿ ಸೇವಕನನ್ನು 30 ತಿಂಗಳಕಾಲ ಕೆಲಸದಿಂದ ಅಮಾನತು ಮಾಡಲಾಗಿದ್ದು, ಆತನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com