ಇನ್ನು ಮುಂದೆ ಆರ್ಥಿಕ ಅಶಿಸ್ತು ಆಡಳಿತಾತ್ಮಕ ವೈಫಲ್ಯಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಬೇಕು ಎಂಬ ಅಂಶವನ್ನೂ ಪಿಐಎಲ್ನಲ್ಲಿ ಸೇರಿಸಲಾಗಿದೆ. ಒಂದು ವೇಳೆ ಯಾವುದೇ ಅಧಿಕಾರಿಗಳು ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಲ್ಲಿ ಅವರ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸಲು ಅನುವು ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಲಾಗಿದೆ. ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ರಾಜೀವ್ ಚಂದ್ರಶೇಖರ್ ಅವರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, 2010ರ ವರೆಗೆ ಮಾತ್ರ ಬಿಬಿಎಂಪಿಯಲ್ಲಿ ಆಡಿಟ್ ನಡೆಸಲಾಗಿದೆ. ನಂತರದ ವರ್ಷಗಳಲ್ಲಿ ಸರಿಯಾದ ರೀತಿಯಲ್ಲಿ ಲೆಕ್ಕಪತ್ರ ಪರಿಶೋಧನೆ ನಡೆಸಿಲ್ಲ. 2013ರಲ್ಲಿ ಸಿಎಜಿ ಒಂದು ವರದಿ ನೀಡಿದ್ದು, ಇದರ ಪ್ರಕಾರ, ಬಿಬಿಎಂಪಿಯ ಲೆಕ್ಕಪತ್ರಗಳು ಸರಿಯಾಗಿಲ್ಲ. ಕಾಮಗಾರಿ, ವೆಚ್ಚದ ಕುರಿತಂತೆ ದಾಖಲೆಗಳಿಲ್ಲ ಎಂದು ಹೇಳಿದೆ. ನಿಗದಿಯ ಸಮಯದಲ್ಲಿ ಆಡಿಟ್ ಮಾಡಿಲ್ಲ. ಜತೆಗೆ ಬಿಬಿಎಂಪಿ ಆಂತರಿಕವಾಗಿಯೂ ಯಾವುದೇ ಲೆಕ್ಕಪತ್ರಗಳನ್ನು ಇಟ್ಟುಕೊಂಡಿಲ್ಲ ಎಂದು 2015ರಲ್ಲಿ ಸಿಎಜಿ ಮತ್ತೊಮ್ಮೆ ಹೇಳಿತ್ತು.