ದೇಶ
ಕೀರ್ತಿ ಅಜಾದ್ ಅಮಾನತು: ಆರ್ಎಸ್ಎಸ್ ಅತೃಪ್ತಿ
ಕೀರ್ತಿ ಆಜಾದ್ ವಿರುದ್ಧ ಕ್ರಮ ಕೈಗೊಂಡ ಬಿಜೆಪಿ ನಾಯಕರ ವಿರುದ್ಧ ಆರ್ಎಸ್ಎಸ್ ಅತೃಪ್ತಿ ವ್ಯಕ್ತಪಡಿಸಿದೆ...
ನವದೆಹಲಿ: ಕೀರ್ತಿ ಆಜಾದ್ ವಿರುದ್ಧ ಕ್ರಮ ಕೈಗೊಂಡ ಬಿಜೆಪಿ ನಾಯಕರ ವಿರುದ್ಧ ಆರ್ಎಸ್ಎಸ್ ಅತೃಪ್ತಿ ವ್ಯಕ್ತಪಡಿಸಿದೆ.
ಆಜಾದ್ರನ್ನು ಅಮಾನತು ಮಾಡುವ ಮುನ್ನ ತಮ್ಮ ಜತೆ ಸಂಪರ್ಕಿಸಿಯೇ ಇಲ್ಲ ಎಂದು ಸಂಘಟನೆ ನಾಯಕರು ಪ್ರತಿಪಾದಿಸಿದ್ದಾರೆ. ಇಂಥ ಕಠಿಣ ಕ್ರಮದ ಬದಲು ಬೇರೆ ದಾರಿ ಹುಡುಕ ಬೇಕಾಗಿತ್ತು. ಅಮಾನತು ಮಾಡಿದ್ದರಿಂದಾಗಿ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಆರ್ಎಸ್ ಎಸ್ ನಾಯಕರು ಆಂತರಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.