ದೆಹಲಿ-ಮೀರತ್ ಎಕ್ಸ್ ಪ್ರೆಸ್ ಹೈ ವೇಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ದೆಹಲಿ-ಮೀರತ್ 14 ಪಥಗಳ ಎಕ್ಸ್ ಪ್ರೆಸ್ ಹೈ ವೇಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕು ಸ್ಥಾಪನೆ ನೆರವೇರಿಸಿದರು...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ದೆಹಲಿ-ಮೀರತ್ 14 ಪಥಗಳ ಎಕ್ಸ್ ಪ್ರೆಸ್ ಹೈ ವೇಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕು ಸ್ಥಾಪನೆ ನೆರವೇರಿಸಿದರು.

ಹಳ್ಳಿಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸುವ ಗುರಿ ಇದೆ. ಸಂಪರ್ಕ ವ್ಯವಸ್ಥೆಯೇ ದೇಶದ ಅಭಿವೃದ್ಧಿಯ ಕೀಲಿ ಕೈ. ಮಾಲಿನ್ಯ ಮುಕ್ತ ದೇಶ ಮಾಡುವತ್ತ ಹೊಸ ಹೆಜ್ಜೆ ಇದಾಗಿದೆ. ದೆಹಲಿ ಮತ್ತು ಮೀರತ್ ನಡುವಿನ 14 ಪಥಗಳ ಎಕ್ಸ್ ಪ್ರೆಸ್ ಹೈವೇಗೆ ಸುಮಾರು 10.166 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಿದರು.

ಎಕ್ಸ್ ಪ್ರೆಸ್ ಹೈವೇ ನಿರ್ಮಾಣದಿಂದ ಪ್ರವಾಸೋದ್ಯಮ ಹಾಗೂ ಸಾವಿರಾರು ಉದ್ಯೋಗ ಸೃಷ್ಠಿಯಾಗಲಿದೆ. ದೆಹಲಿಯ ಉಪನಗರಗಳನ್ನು ಈ ಹೈವೇ ಸಂಪರ್ಕಿಸಲಿದೆ. ಹಳ್ಳಿ, ಹಳ್ಳಿಗಳ ನಡುವೆ ಉತ್ತಮ ಸಂಪರ್ಕ ರಸ್ತೆ ನಿರ್ಮಾಣವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com