ಕಳ್ಳ ಸಾಗಣೆ ಆರೋಪ: ಏರ್ ಇಂಡಿಯಾ ಸಿಬ್ಬಂದಿಗಳ ಶೋಧ

ಬರೋಬ್ಬರಿ 78 ಲಕ್ಷ ಚಿನ್ನ ಕಳ್ಳ ಸಾಗಣೆ ಆರೋಪದ ಮೇಲೆ ಮುಂಬೈ ವಿಮಾನ ನಿಲ್ದಾಣದಲ್ಲಿ....
ಕಳ್ಳ ಸಾಗಣೆ ಆರೋಪ: ಏರ್ ಇಂಡಿಯಾ ಸಿಬ್ಬಂದಿಗಳ ಶೋಧ

ನವದೆಹಲಿ: ಬರೋಬ್ಬರಿ 78 ಲಕ್ಷ ಚಿನ್ನ ಕಳ್ಳ ಸಾಗಣೆ ಆರೋಪದ ಮೇಲೆ ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಿಬ್ಬಂದಿಗಳನ್ನು ತೀವ್ರ  ತಪಾಸಣೆಗೊಳಪಡಿಸಲಾಗಿದೆ.

ಮುಂಬೈನಿಂದ ಅಹಮದಾಬಾದ್‌ಗೆ ಹೋಗುತ್ತಿರುವ ಎಐ-012 ಸಂಖ್ಯೆಯ ಏರ್ ಇಂಡಿಯಾ ವಿಮಾನದಲ್ಲಿ ಅಲ್ಲಿನ ಸಿಬ್ಬಂದಿಗಳಾದ ನಿಹಾಲ್ ಪ್ರಜಾಪತಿ ಹಾಗೂ ಸಿದ್ದೇಶ್ ಪಾಟೀಲ್ ಎಂಬುವರು ವಿಮಾನದಲ್ಲಿ 3 ಕೆಜಿ ಚಿನ್ನವನ್ನು ಕಳ್ಳ ಸಾಗಣೆ ಮಾಡುದ್ದಾರೆ ಎಂದು ಆರೋಪಿಸಿ ಪ್ರಯಾಣಿಕರೊಬ್ಬರು ಫೆ. 10ರಂದು  ಏರ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕರಿಗೆ ಪತ್ರ ಬರೆದಿದ್ದರು.

ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ನಿರ್ದೇಶಕರು ವಿಷಯವನ್ನು ಏರ್ ಇಂಡಿಯಾದ ಗುಪ್ತಚರ ಇಲಾಖೆಯ ಆಯುಕ್ತರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಆಯುಕ್ತರು ಚತ್ರಪತಿ ಶಿವಾಜಿ ಟರ್ಮಿನಲ್ 2 ವಿಮಾನದಲ್ಲಿನ ಯಾರೊಬ್ಬ ಸಿಬ್ಬಂದಿಯನ್ನು ಬಿಡದೆ ಎಲ್ಲರನ್ನು ತಪಾಸಣೆಗೊಳಪಡಿಬೇಕೆಂದು ಸೂಚನೆ ನೀಡಿದ್ದಾರೆ. ಅಲ್ಲದೇ ಒಂದು ವೇಳೆ ಆರೋಪ ನಿಜವಾಗಿ, ಯಾರಾದರೂ ಸಿಕ್ಕಿ ಹಾಕಿಕೊಂಡರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com