ಕಳ್ಳ ಸಾಗಣೆ ಆರೋಪ: ಏರ್ ಇಂಡಿಯಾ ಸಿಬ್ಬಂದಿಗಳ ಶೋಧ

ಬರೋಬ್ಬರಿ 78 ಲಕ್ಷ ಚಿನ್ನ ಕಳ್ಳ ಸಾಗಣೆ ಆರೋಪದ ಮೇಲೆ ಮುಂಬೈ ವಿಮಾನ ನಿಲ್ದಾಣದಲ್ಲಿ....
ಕಳ್ಳ ಸಾಗಣೆ ಆರೋಪ: ಏರ್ ಇಂಡಿಯಾ ಸಿಬ್ಬಂದಿಗಳ ಶೋಧ
Updated on

ನವದೆಹಲಿ: ಬರೋಬ್ಬರಿ 78 ಲಕ್ಷ ಚಿನ್ನ ಕಳ್ಳ ಸಾಗಣೆ ಆರೋಪದ ಮೇಲೆ ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಿಬ್ಬಂದಿಗಳನ್ನು ತೀವ್ರ  ತಪಾಸಣೆಗೊಳಪಡಿಸಲಾಗಿದೆ.

ಮುಂಬೈನಿಂದ ಅಹಮದಾಬಾದ್‌ಗೆ ಹೋಗುತ್ತಿರುವ ಎಐ-012 ಸಂಖ್ಯೆಯ ಏರ್ ಇಂಡಿಯಾ ವಿಮಾನದಲ್ಲಿ ಅಲ್ಲಿನ ಸಿಬ್ಬಂದಿಗಳಾದ ನಿಹಾಲ್ ಪ್ರಜಾಪತಿ ಹಾಗೂ ಸಿದ್ದೇಶ್ ಪಾಟೀಲ್ ಎಂಬುವರು ವಿಮಾನದಲ್ಲಿ 3 ಕೆಜಿ ಚಿನ್ನವನ್ನು ಕಳ್ಳ ಸಾಗಣೆ ಮಾಡುದ್ದಾರೆ ಎಂದು ಆರೋಪಿಸಿ ಪ್ರಯಾಣಿಕರೊಬ್ಬರು ಫೆ. 10ರಂದು  ಏರ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕರಿಗೆ ಪತ್ರ ಬರೆದಿದ್ದರು.

ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ನಿರ್ದೇಶಕರು ವಿಷಯವನ್ನು ಏರ್ ಇಂಡಿಯಾದ ಗುಪ್ತಚರ ಇಲಾಖೆಯ ಆಯುಕ್ತರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಆಯುಕ್ತರು ಚತ್ರಪತಿ ಶಿವಾಜಿ ಟರ್ಮಿನಲ್ 2 ವಿಮಾನದಲ್ಲಿನ ಯಾರೊಬ್ಬ ಸಿಬ್ಬಂದಿಯನ್ನು ಬಿಡದೆ ಎಲ್ಲರನ್ನು ತಪಾಸಣೆಗೊಳಪಡಿಬೇಕೆಂದು ಸೂಚನೆ ನೀಡಿದ್ದಾರೆ. ಅಲ್ಲದೇ ಒಂದು ವೇಳೆ ಆರೋಪ ನಿಜವಾಗಿ, ಯಾರಾದರೂ ಸಿಕ್ಕಿ ಹಾಕಿಕೊಂಡರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com