ನವದೆಹಲಿ: ಪ್ರಧಾನಿ ಮೋದಿ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ನಡುವೆ ಈಗ `ಪವರ್ ಪಾಲಿಟಿಕ್ಸ್' ಆರಂಭ. ದಿಲ್ಲಿಗರಿಗೆ ಉಚಿತ ವಿದ್ಯುತ್ ನೀಡುವ ಘೋಷಣೆಯನ್ನು ಮೋದಿ ಲೇವಡಿ ಮಾಡಿದ್ದಾರೆ.
`ಪ್ರತಿ ಚುನಾವಣೆ ವೇಳೆಯೂ ಪಕ್ಷಗಳು ಇಂಥ ಭರವಸೆ ನೀಡುತ್ತವೆ. ಆದರೆ ಜನರು ಅವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಂಥ ಭರವಸೆಯನ್ನು ಸಾಮಾನ್ಯವಾಗಿ ವಿದ್ಯುತ್ ಉತ್ಪಾದಿಸದ ರಾಜ್ಯಗಳೇ ನೀಡುತ್ತವೆ' ಎನ್ನುವ ಮೂಲಕ ಪ್ರಧಾನಿ ಆಪ್ ಕಾಲೆಳೆದಿದ್ದಾರೆ.
ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿರುವ ಆಪ್ ಪ್ರಧಾನಿಯವರೇ ಕಡಿಮೆ ಖರ್ಚಲ್ಲಿ ವಿದ್ಯುತ್ ಉತ್ಪಾದಿಸುವ ದಾರಿ ತೋರಿಸಲಿ ಎಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆಪ್ ಮುಖಂಡ ಅಶುತೋಶ್, `ಪ್ರಧಾನಿ ವಿರುದ್ಧ ಯಾವುದೇ ಹೇಳಿಕೆ ನೀಡಲು ಬಯಸಲ್ಲ. ಆದರೆ, ನಮ್ಮ ಪಕ್ಷದ ಪರವಾಗಿ ಅವರಿಗೆ ವಿದ್ಯುತ್ ದರ ಕಡಿಮೆಗೊಳಿಸುವಂತೆ ಮನವಿ ಮಾಡುತ್ತೇನೆ. ಏಕೆಂದರೆ ಇದರಿಂದ ದೆಹಲಿ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ. ಪ್ರಧಾನಿ ಕೂಡ ಇದನ್ನೇ ಬಯಸುತ್ತಾರೆ ಎಂದು ನಂಬಿದ್ದೇನೆ' ಎಂದಿದ್ದಾರೆ.
Advertisement