ಸುನಂದಾ ಸಾವು: ಮಾಧ್ಯಮಗಳ ವಿರುದ್ಧ ಹರಿಹಾಯ್ದ ತರೂರ್

ಸುನಂದಾ ಸಾವು ಪ್ರಕರಣ ಸಂಬಂಧಿಸಿದಂತೆ ಮಾಧ್ಮಮಗಳ ವರದಿಗಳು ಆಧಾರ ರಹಿತವಾಗಿದೆ...
ಮಾಜಿ ಕೇಂದ್ರ ಸಚಿವ ಶಶಿ ತರೂರ್
ಮಾಜಿ ಕೇಂದ್ರ ಸಚಿವ ಶಶಿ ತರೂರ್
Updated on

ನವದೆಹಲಿ: ಸುನಂದಾ ಸಾವು ಪ್ರಕರಣ ಸಂಬಂಧಿಸಿದಂತೆ ಮಾಧ್ಮಮಗಳ ವರದಿಗಳು ಆಧಾರ ರಹಿತವಾಗಿದೆ ಎಂದಿರುವ ಕೇಂದ್ರ ಮಾಜಿ ಸಚಿವ ಶಶಿ ತರೂರ್ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

ಈ ಕುರಿತಂತೆ ಇಂದು ತಮ್ಮ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಶಶಿ ತರೂರ್, ಸುನಂದಾ ಸಾವು ಕುರಿತಂತೆ ಮಾಧ್ಯಮಗಳು ನನ್ನ ವಿರುದ್ಧ ಸುಳ್ಳು ವರದಿ ಪ್ರಸಾರ ಮಾಡುತ್ತಿದ್ದು, ಈ ವರದಿಗಳು ಆಧಾರ ರಹಿತ ಕಥೆಗಳಾಗಿವೆ ಆರೋಪ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶಕ್ಕೆ ಉತ್ತಮ ಹಾಗೂ ಪ್ರಮಾಣಿಕ ಪತ್ರಿಕೋದ್ಯಮ ಅವಶ್ಯಕತೆಯಿದ್ದು, ಟಿಆರ್‌ಪಿ ಹೆಚ್ಚಿಸುಕೊಳ್ಳುವ ಸಲುವಾಗಿ ಇಲ್ಲ ಸಲ್ಲದ ಸುಳ್ಳು ವರದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ ಎಂದು ಹೇಳಿದ್ದಾರೆ.

ಸುನಂದಾ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿಯ ಎಸ್‌ಐಟಿ ಪೊಲೀಸರು ಸುನಂದಾ ಪುಷ್ಕರ್ ಅವರ ಪತಿ ಹಾಗೂ ಕೇಂದ್ರ ಮಾಜಿ ಸಚಿವ ಶಶಿ ತರೂರ್ ಅವರನ್ನು ಈವರೆಗೂ 3 ಬಾರಿ ವಿಚಾರಣೆಗೊಳಪಡಿಸಿತ್ತು. ವಿಚಾರಣೆ ವೇಳೆ ಶಶಿ ತರೂರ್ ಅವರ ಆಪ್ತರಾದ ಸಂಜಯ್ ದಿವನ್, ಡ್ರೈವರ್ ಬಜರಂಗಿ ಹಾಗೂ ನಾರಾಯಣ್ ಅವರನ್ನೂ ತನಿಖೆಗೊಳಪಡಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com