ಸಂಸತ್ ನಲ್ಲಿ ಇಂದು ಕಲ್ಲಿದ್ದಲು ವಿಧೇಯಕ?

ಭೂಸ್ವಾಧೀನ ಸುಗ್ರೀವಾಜ್ಞೆ ಸಂಸತ್ ನಲ್ಲಿ ಕೋಲಾಹಲಕ್ಕೆ ಕಾರಣ ವಾಗಿರುವಂತೆಯೇ ಕೇಂದ್ರ ಸರ್ಕಾರ ಸಂಸತ್ ನಲ್ಲಿ ಗುರುವಾರ ಕಲ್ಲಿದ್ದಲು ತಿದ್ದುಪಡಿ ಹಾಗೂ ಪೌರತ್ವ ವಿಧೇಯಕಗಳನ್ನು ಮಂಡಿಸಲು ನಿರ್ಧರಿಸಿದೆ...
ಸಂಸತ್ ನಲ್ಲಿ ಇಂದು ಕಲ್ಲಿದ್ದಲು ವಿಧೇಯಕ?
Updated on

ನವದೆಹಲಿ: ಭೂಸ್ವಾಧೀನ ಸುಗ್ರೀವಾಜ್ಞೆ ಸಂಸತ್ ನಲ್ಲಿ ಕೋಲಾಹಲಕ್ಕೆ ಕಾರಣ ವಾಗಿರುವಂತೆಯೇ ಕೇಂದ್ರ ಸರ್ಕಾರ ಸಂಸತ್ ನಲ್ಲಿ ಗುರುವಾರ ಕಲ್ಲಿದ್ದಲು ತಿದ್ದುಪಡಿ ಹಾಗೂ ಪೌರತ್ವ ವಿಧೇಯಕಗಳನ್ನು ಮಂಡಿಸಲು ನಿರ್ಧರಿಸಿದೆ.

ಅದಕ್ಕೆ ಪೂರಕವಾಗಿ ರಾಜ್ಯಸಭೆಯಿಂದ ಹಳೆಯ ವಿಧೇಯಕ ವಾಪಸಿಗೆ ನೋಟಿಸ್ ನೀಡಿದೆ. ಆದರೆ, ಪ್ರತಿಪಕ್ಷಗಳು ಈ ಪ್ರಯತ್ನಕ್ಕೆ ಅಡ್ಡಿಮಾಡುವ ಸಾಧ್ಯತೆಗಳೇ ಹೆಚ್ಚು, ಹೀಗಾಗಿ  ಮತ್ತೊಮ್ಮೆ ಸಂಸತ್ ನಲ್ಲಿ ಆಡಳಿತ ಪ್ರತಿಪಕ್ಷಗಳ ನಡುವೆ ಮತ್ತೊಂದು ಸಂಘರ್ಷ ವೇದಿಕೆ ಸಿಗುವುದು ಬಹುತೇಕ ಖಚಿತವಾಗಿದೆ.

ಕೈ ಹೋರಾಟ: ಪ್ರಮುಖ ನಾಯಕರಾಗಿರುವ ಸೋನಿಯಾ ಮತ್ತು ರಾಹುಲ್ ಅನುಪಸ್ಥಿತಿ ಮಧ್ಯೆಯೂ ಕೈ ನಾಯಕರು ಸಂಸತ್ತಿನ ಒಳಗೆ ಮತ್ತು ಹೊರಗೆ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಿದ್ದಾರೆ. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಎರಡು ದಿನಗಳ ಪ್ರತಿಭಟನೆ ಮುಕ್ತಾಯಗೊಂಡ ಬೆನ್ನಲ್ಲೇ ಜಂತರ್ಮಂತರ್ ನಲ್ಲಿ ಕಾಂಗ್ರೆಸ್ `ಜಮೀನ್ ವಾಪ್ಸಿ ಆಂದೋಲನ್' ಆರಂಭಿಸಿದೆ. ಈ ವೇಳೆ ಮೋದಿ ಸರ್ಕಾರವನ್ನು `ರೈತ ವಿರೋಧಿ' ಎಂದು ಕರೆದಿರುವ ಕಾಂಗ್ರೆಸ್ ಮುಖಂಡರು, ವಿವಾದಾತ್ಮಕ ಸುಗ್ರೀವಾಜ್ಞೆ ವಿರುದ್ಧ ದೇಶಾದ್ಯಂತ ಹೋರಾಟ ನಡೆಸುವ ಶಪಥ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com