ಕೊಚ್ಚಿ: ಮರು ಮತಾಂತರ 'ಘರ್ವಾಪಸಿ' ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರೋಧ ಇಲ್ಲ ಎಂದು ಎಂದು ಕೇರಳ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂಟಿ ರಮೇಶ್ ಹೇಳಿದ್ದಾರೆ.
ವಿವಾದಾತ್ಮಕ ಮರು ಮತಾಂತರ 'ಘರ್ವಾಪಸಿ' ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರ ವಿರೋಧವಿಲ್ಲ ಎಂದು ಸ್ಪಷ್ಟನೇ ನೀಡಿದ್ದಾರೆ.
ಘರ್ ವಾಪಸಿ ಕಾರ್ಯಕ್ರಮ ಹೊಸ ವಿದ್ಯಾಮಾನವೇನಲ್ಲ. ಹಿಂದೂ ಧರ್ಮದಿಂದ ಅನ್ಯ ಧರ್ಮಕ್ಕೆ ಮತಾಂತರಗೊಂಡಿದ್ದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಇದು ಹಿಂದಿನಿಂದಲೂ ನಡೆದು ಬಂದಿದೆ.
ಅನ್ಯ ಧರ್ಮಕ್ಕೆ ಬಲವಂತವಾಗಿ ಮತಾಂತಗೊಂಡಿದ್ದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಸ್ವಇಚ್ಛೆಯಿಂದ ಈ ಮರುಮತಾಂತರ ನಡೆಯುತ್ತಿದೆ. ಮರು ಮತಾಂತರ ನ್ಯಾಯಸಮ್ಮತವಲ್ಲ ಎಂದು ಹೇಗೆ ಹೇಳಲಾಗುತ್ತದೆ. ಮತಾಂತರ ಕಾನೂನು ಬದ್ಧವಾಗಿದ್ದರೆ, ಮರು ಮತಾಂತರವು ಕಾನೂನು ಬದ್ಧವಾಗಿರುತ್ತದೆ ಎಂದು ಹೇಳಿದ್ದಾರೆ.
ಸ್ವಇಚ್ಛೆಯಿಂದ ತಮ್ಮ ಧರ್ಮಕ್ಕೆ ಹಿಂದಿರುಗಿ ಬಂದರೆ, ಇದರಲ್ಲಿ ಕಾನೂನು ಉಲ್ಲಂಘನೆಯಾಗುವುದಿಲ್ಲ. ಬಲವಂತವಾಗಿ ಮತಾಂತರ ಮಾಡಿದರೆ ಮಾತ್ರ ಕಾನೂನು ಉಲ್ಲಂಘನೆಯಾಗುತ್ತದೆ.
ಧರ್ಮ ಬಿಟ್ಟು ಹೋಗಿದ್ದವರು ಮತ್ತೆ ಧರ್ಮಕ್ಕೆ ವಾಪಾಸ್ಸಾದರೆ ಯಾವುದೇ ತಪ್ಪಿಲ್ಲ, ಹಾಗೆ ಸಮಾಜಕ್ಕೆ ಧಕ್ಕೆಯಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Advertisement