ರೈಲು ಹತ್ತಿದರೆ ಮನೆ ಸೇರೋದು ಸುಲಭ

ರೈಲು ನಿಲ್ಧಾಣದಲ್ಲಿ ಇಳಿಯುತ್ತಿದ್ದಂತೆ ಯಾರಾದರೂ ನಮ್ಮನ್ನು ಸ್ವಾಗತಿಸಿ...
ರೈಲು ಹತ್ತಿದರೆ ಮನೆ ಸೇರೋದು ಸುಲಭ

ನವದೆಹಲಿ: ರೈಲು ನಿಲ್ಧಾಣದಲ್ಲಿ ಇಳಿಯುತ್ತಿದ್ದಂತೆ ಯಾರಾದರೂ ನಮ್ಮನ್ನು ಸ್ವಾಗತಿಸಿ, ನಮ್ಮ ಲಗೇಜ್‌ಗಳನ್ನು ಹೊತ್ತು, ಸುರಕ್ಷಿತವಾಗಿ ಕ್ಯಾಬ್‌ಗಳಲ್ಲಿ ನಮ್ಮನ್ನು ಮನೆ ತಲುಪಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹೆಚ್ಚಿನವರು ಭಾವಿಸುವುದುಂಟು.

ಈ ಕಲ್ಪನೆ ಸದ್ಯದಲ್ಲೇ ಸಾಕಾರಗೊಳ್ಳಲಿದೆ. ಈ ಎಲ್ಲ ಸೇವೆಗಳನ್ನು ಒದಗಿಸುವ ಪ್ಯಾಕೇಜ್ ಅನ್ನು ಪರಿಚಯಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಟಿಕೆಟ್-ಬುಕಿಂಗ್ ವೆಬ್‌ಸೈಟ್‌ನಲ್ಲಿ ಇಂತಹ ಸೇವೆ ಕಲ್ಪಿಸಲಾಗುತ್ತದೆ. ಈ ಹೊಸ ಯೋಜನೆಗೆ ಸಚಿವ ಸುರೇಶ್ ಪ್ರಭು ಅವರು ಕಳೆದ ತಿಂಗಳೇ ಹಸಿರು ನಿಶಾನೆ ತೋರಿದ್ದಾರೆ.

ಈ ಯೋಜನೆಯು ಮೊದಲಿಗೆ ನವದೆಹಲಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಈ ಬಗ್ಗೆ ಶೀಗ್ರದಲ್ಲೇ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗುವುದು ಎಂದು ಐಆರ್‌ಸಿಟಿಸಿ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಎ.ಕೆ ಮನೋಚಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com