ಗಾಂಧಿನಗರ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಶ್ವದ ಯಾವುದೇ ಮೂಲೆಯಲ್ಲಿದ್ದರು ಹಿಡಿದು ಬಂಧಿಸಿ, ನ್ಯಾಯಾಲಯದ ಮುಂದೆ ತಂದು ನಿಲ್ಲಿಸುತ್ತೇವೆ ಎಂದು ಭಾರತ ಸರ್ಕಾರ ಹೇಳಿದೆ.
ದಾವೂದ್ ಇಬ್ರಾಹಿಂ ಹಿಡಿಯಲು ಸಾಕಷ್ಟು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಅವನನ್ನು ಹಿಡಿದೇ ತೀರುತ್ತೇವೆ. ನ್ಯಾಯಾದಿಂದ ತಪ್ಪಿಸಿಕೊಂಡಿದ್ದಾನೆ. ಅವನು ಮಾಡಿರುವಂತಹ ಕೃತ್ಯಗಳನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಅದೂ ಮುಂಬೈ ದಾಳಿಗೆ ಮೂಲ ಕಾರಣನಾಗಿರುವ ದಾವೂದ್ನನ್ನು ಬಿಡಲು ಸಾಧ್ಯವೇ ಇಲ್ಲ ಎಂದು ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಸಯ್ಯದ್ ಅಕ್ಬುರುದ್ದೀನ್ ಹೇಳಿದ್ದಾರೆ.
ಇರಾಕ್ನಲ್ಲಿ ಭಾರತೀಯರು ನಾಪತ್ತೆಯಾಗಿರುವ ಸಂಬಂಧ ಪ್ರತಿಕ್ರಯಿಸಿದ ಅವರು, ಕೇಂದ್ರ ಸರ್ಕಾರ ಈ ಸಂಬಂಧ ಕ್ರಮ ಕೈಗೊಂಡಿದೆ. ಇರಾಕ್ ಸರ್ಕಾರದೊಂದಿಗೆ ಚರ್ಚಿಸಿದ್ದು, ಮಾಹಿತಿಯನ್ನು ಪಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
Advertisement