ಸ್ವಾಮಿಗೆ ಸುನಂದಾ ಹಂತಕ ಯಾರೆಂದು ತಿಳಿದಿದ್ರೆ ಬಹಿರಂಗಪಡಿಸಲಿ: ಶಶಿ ತರೂರ್

ಶಶಿ ತರೂರ್
ಶಶಿ ತರೂರ್
Updated on

ನವದೆಹಲಿ: ಸುನಂದಾ ಪುಷ್ಕರ್ ಹಂತಕ ಯಾರೆಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿಗೆ ತಿಳಿದಿದ್ರೆ ಬಹಿರಂಗಪಡಿಸಲಿ ಎಂದು ಶಶಿ ತರೂರ್ ತಿರುಗೇಟು ನೀಡಿದ್ದಾರೆ.

ಸುಖಾ ಸುಮ್ಮನೆ ಆರೋಪ ಮಾಡುತ್ತಿರುವ ಸ್ವಾಮಿಗೆ ಬಹಿರಂಗ ಸವಾಲು ಹಾಕಿರುವ ಶಶಿ ತರೂರ್ ಸ್ವಾಮಿಗೆ ಸುನಂದಾ ಹಂತಕರು ಯಾರೆಂದು ತಿಳಿದಿದ್ರೆ ಪೊಲೀಸರ ಮುಂದೆ ಬಹಿರಂಗ ಪಡಿಸಲಿ ಎಂದಿದ್ದಾರೆ. ಪ್ರಕರಣದ ಬಗ್ಗೆ ಹೇಳಿಕೆ ನೀಡಲು ಸ್ವಾಮಿ ಯಾರು ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ವಾಮಿ,  ಸುನಂದಾ ಶಶಿ ತರೂರ್ ಕೊಲೆ ಮಾಡಿದ್ದಾರೆಂದು ನಾನು ಹೇಳಿಲ್ಲ, ಆದರೆ ಶಶಿ ತರೂರ್‌ಗೆ ಹಂತಕರು ಯಾರೆಂದು ಗೊತ್ತಿದೆ. ಶಶಿ ತರೂರ್ ಬಾಯಿಬಿಟ್ಟರೆ ಏಳು ನಾಯಕರು ಸಿಕ್ಕಿಬೀಳುತ್ತಾರೆ ಎಂದು ಸ್ವಾಮಿ ಹೇಳಿದರು.

 ತರೂರ್ ಪ್ರಕರಣವನ್ನು ಮುಚ್ಚಿಹಾಕಲು ಸುಳ್ಳುಗಳ ಕಂತೆಯನ್ನು ಸೃಷ್ಟಿಸಿದ್ದಾರೆ ಎಂದು ಸ್ವಾಮಿ ಶನಿವಾರ ಆರೋಪಿಸಿದ್ದರು. ತರೂರ್‌ಗೆ ಸುನಂದಾರನ್ನು ಕೊಲೆ ಮಾಡಿದ್ದು ಯಾರೆಂದು ಗೊತ್ತಿದ್ದು, ಹತ್ಯೆಗೆ ನೆರವಾಗಿದ್ದಾರೆ. ಅವರು ಸುಳ್ಳುಗಳನ್ನು ಹೇಳುವ ಮೂಲಕ ಪ್ರಕರಣ ಮುಚ್ಚಲು ಪ್ರಯತ್ನಿಸಿದ್ದರಿಂದ ಅವರನ್ನು ಕೂಡ ಜೈಲಿಗೆ ಕಳಿಸಬೇಕು, ಆದರೆ ಮರಣ ದಂಡನೆ ಇರುವುದಿಲ್ಲ ಎಂದು ಸ್ವಾಮಿ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com