ಬಿಯಾಂತ್ ಸಿಂಗ್ ಹತ್ಯೆ ಆರೋಪಿ ಭಾರತಕ್ಕೆ ಗಡಿಪಾರು

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಆರೋಪಿ, ನಿಷೇಧಿತ...
ಉಗ್ರ ಜಕ್ತಾರ್ ಸಿಂಗ್ ತಾರಾ
ಉಗ್ರ ಜಕ್ತಾರ್ ಸಿಂಗ್ ತಾರಾ

ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಆರೋಪಿ, ನಿಷೇಧಿತ ಬಬ್ಬರ್ ಖಾಲ್ಸಾ ಸಂಘಟನೆಯ ಉಗ್ರ ಜಕ್ತಾರ್ ಸಿಂಗ್ ತಾರಾನನ್ನು ಥಾಯ್‌ಲ್ಯಾಂಡ್‌ನಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ.

ತಾರಾ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ. 2004ರಲ್ಲಿ ಈತ ಚಂಡೀಗಡದ ಬುರೈಲ್ ಜೈಲಿನಿಂದ ತಪ್ಪಿಸಿಕೊಂಡಿದ್ದ. ಈತನನ್ನು ಜ.5ರಂದು ಥಾಯ್‌ಲ್ಯಾಂಡ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಸಿಬಿಐ ಪ್ರಕಾರ, ಬಿಯಾಂತ್ ಸಿಂಗ್ ಹತ್ಯೆಲಲ್ 37 ವರ್ಷದ ತಾರಾನ ನೇರ ಕೈವಾಡವಿದೆ.

ಬಿಯಾಂತ್ ಸಿಂಗ್‌ರನ್ನು ಆ.31, 1995ರಲ್ಲಿ ಹತ್ಯೆ ಮಾಡಲಾಗಿತ್ತು. ಈ ವೇಳೆ ಮೂರು ಕಮಾಂಡೋಗಳು ಸೇರಿ ಒಟ್ಟು 17 ಮಂದಿ ಮೃತಪಟ್ಟಿದ್ದರು. ಒಟ್ಟು ಈ ಹತ್ಯೆಯಲ್ಲಿ 13 ಮಂದಿ ಪಾಲ್ಗೊಂಡಿದ್ದು, ಇವರಲ್ಲಿ 9 ಮಂದಿಯನ್ನು ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com