ನವದೆಹಲಿ: ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಿಲುಕಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ನ ಬುನಾದಿಯೇ ಈಗ ಅಲುಗಾಡುತ್ತಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಪುಟದಲ್ಲಿರುವ ನಾಲ್ವರು ಸಚಿವರೇ ಈಗಬಿಜೆಪಿ ಸೇರಲು ಮುಂದಾಗಿದ್ದಾರೆ.
ರಚ್ಪಾಲ್ ಸಿಂಗ್, ರಾಬಿ ರಂಜನ್ ಚಟರ್ಜಿ, ಕೃಷ್ಣೇಂದು ಚೌಧುರಿ ಮತ್ತು ಸಾಧನ್ ಪಾಂಡೆ ಅವರು ಬಿಜೆಪಿ ಸೇರ್ಪಡೆಗೊಳ್ಳುವ ಮುಖಂಡರು. ಕಳೆದ ವಾರವಷ್ಟೇ ಮತ್ತೊಬ್ಬ ಸಚಿವರಾದ ಮಂಜುಲ್ ಕೃಷ್ಣಾ ಠಾಕೂರ್ ಬಿಜೆಪಿ ಸೇರ್ಪಡೆಗೊಂಡಿದ್ದರು. ಈ ನಡುವೆ, ಮಾಜಿ ರೈಲ್ವೆ ಸಚಿವ, ಸಂಸದ ದಿನೇಶ್ ತ್ರಿವೇದಿ ಕೂಡ ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ. ನಾನು ಸದ್ಯ ಈ ಕುರಿತುಏನನ್ನೂ ಹೇಳುವುದಿಲ್ಲ. ಆದರೆ, ನಾನು ಭಾರತೀಯ ರಾಜಕಾರಣದ ಡಿಎನ್ ಎ(ವಂಶವಾಹಿನಿ)ಯನ್ನೇ ಬದಲಾಯಿಸ ಬಯಸುತ್ತೇನೆ. ಅದಕ್ಕಾಗಿ ಏನೆಲ್ಲ ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡುತ್ತೇನೆ ಎಂದು ತ್ರಿವೇದಿ ಹೇಳಿದ್ದಾರೆ. ಇದೇ ವೇಳೆ ಅವರು ಮೋದಿ ಅವರನ್ನೂ ಹೊಗಳಿದ್ದಾರೆ. ಇದುಅವರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ವದಂತಿಗೆ ಇನ್ನಷ್ಟು ಬಲ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂಥ ನೆಲೆ ಇಲ್ಲ. ಆದರೆ,ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತನ್ನನೆಲೆ ಭದ್ರಗೊಳಿಸಲು ಪ್ರಯತ್ನಿಸುತ್ತಿದೆ.
ಇದಕ್ಕಾಗಿ ಅದು ತೃಣಮೂಲ ಕಾಂಗ್ರೆಸ್ನ ನಾಯಕರನ್ನೇ ತನ್ನತ್ತ ಸೆಳೆದುಕೊಳ್ಳುತ್ತಿದೆ. ಇದೇ ವೇಳೆ ಬರ್ದ್ವಾನ್ನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸದ್ಯ ದೆಹಲಿಯಲ್ಲಿ ಚುನಾವಣೆ ಇದೆ. ಆ ಬಳಿಕಬಂಗಾಳದಲ್ಲೂ ನಾವು ಸರ್ಕಾರ ರಚಿಸುತ್ತೇವೆ ಎಂದು ಹೇಳಿದ್ದಾರೆ.
Advertisement