ಒಬಾಮ ದಂಪತಿಗೆ ಮೈಸೂರು ರೇಷ್ಮೆ ಇಲ್ಲ

ಒಬಾಮ ದಂಪತಿಗೆ ಕೊಡುಗೆಯಾಗಿ ನೀಡಲು ಕರ್ನಾಟಕ ಕಳುಹಿಸಿದ್ದ ಉಡುಗೊರೆಗಳನ್ನು ಕೇಂದ್ರ ಸರ್ಕಾರ...
ಒಬಾಮ ದಂಪತಿಗೆ ಮೈಸೂರು ರೇಷ್ಮೆ ಇಲ್ಲ
Updated on

ನವದೆಹಲಿ: ಒಬಾಮ ದಂಪತಿಗೆ ಕೊಡುಗೆಯಾಗಿ ನೀಡಲು ಕರ್ನಾಟಕ ಕಳುಹಿಸಿದ್ದ ಉಡುಗೊರೆಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಚನ್ನಪಟ್ಟಣದ ಬೊಂಬೆ ಹಾಗೂ ಮೈಸೂರು ರೇಷ್ಮೆ ಸೀರೆಗಳನ್ನು ಕರ್ನಾಟಕ ಒಂದೇ ಪತ್ರದೊಂದಿಗೆ ಕಳುಹಿಸಿತ್ತು.

ಭದ್ರತೆ ದೃಷ್ಟಿಯಿಂದ ಬೊಂಬೆಗಳನ್ನು ತಿರಸ್ಕರಿಸಲಾಗಿದೆ. ಪತ್ರಕ್ಕೆ ಉತ್ತರಿಸುವುಗಾ ಭದ್ರತೆ ಕಾರಣದಿಂದ ನಿಮ್ಮ ಕೊಡುಗೆಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಲಾಗಿದೆ.

ಹೀಗಾಗಿ ರೇಷ್ಮೆ ಸೀರಿಯೂ ತಿರಸ್ಕೃತವಾಗಿದೆ. ಸೀರೆಯೊಂದನ್ನೇ ಪ್ರತ್ಯೇಕವಾಗಿ ಕಳುಹಿಸಿದ್ದರೆ ಸ್ವೀಕೃತವಾಗುವ ಸಾಧ್ಯತೆಗಳಿದ್ದವು ಪಥಸಂಚಲನದಲ್ಲಿಯೂ ಚನ್ನಪಟ್ಟಣದ ಬೊಂಬೆಗಳ ಟ್ಯಾಬ್ಲೊ ಇದೆ. ಮಿಶೆಲ್ ಒಬಾಮ ಅವರಿಗೆ ಉಡುಗೊರೆಯಾಗಿ ನೀಡಲು ಬನಾರಸ್ ಹಾಗೂ ಹೈದ್ರಾಬಾದ್‌ನಿಂದ ಸೀರೆಗಳನ್ನು ತರಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com