ಬರ್ದ್ವಾನ್‌ ಸ್ಫೋಟ: ಎನ್ಐಎನಿಂದ ನಾಲ್ವರ ಬಂಧನ

ಎನ್ಐಎ
ಎನ್ಐಎ
Updated on

ನವದೆಹಲಿ: ಬರ್ದ್ವಾನ್ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಬುಧವಾರ ನಾಲ್ವರನ್ನು ಬಂಧಿಸಿದ್ದಾರೆ.

ಕಳೆದ ಅಕ್ಟೋಬರ್ 24ರಂದು ಬರ್ದ್ವಾನ್‌ನಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ದಲೀಂ ಶೇಕ್, ರೆಹಮಾನ್, ಹಬೀಬುರ್, ಗ್ಯಾಸುದ್ದೀನ್ ಎಂಬುವರನ್ನು ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.

ಸೆರೆ ಸಿಕ್ಕ ಉಗ್ರರಲ್ಲಿ ಒಬ್ಬ ಯುವಕರನ್ನು ಉಗ್ರ ಕೃತ್ಯ ನಡೆಸಲು ಪ್ರಚೋದಿಸುವುದರ ಜತೆಗೆ ಅವರಿಗೆ ಸಂಘಟನೆ ಸೇರುವಂತೆ ಸಾಕಷ್ಟು ಆಮಿಷವನ್ನೂ ಒಡ್ಡುತ್ತಿದ್ದ ಎನ್ನಲಾಗಿದೆ. ಈಗಾಗಲೇ ಈ ಉಗ್ರರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com