ಮುಂಬೈ: ಖ್ಯಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ಭಾರತರತ್ನ ಸಿಗಬೇಕಿತ್ತು ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿ ದ್ದ ಹೇಳಿಕೆಯನ್ನು ಬಿಗ್ಬಿ ನಯವಾಗಿ ತಿರಸ್ಕರಿಸಿದ್ದಾರೆ. ಅಮಿತಾಭ್ಗೆ ಪದ್ಮ ವಿಭೂಷಣ ಕೊಡುವುದಕ್ಕಿಂತ ಭಾರತರತ್ನ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕಿತ್ತು ಎಂದು ಮಮತಾ ಸೋಮವಾರ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿ ಸಿದ್ದರು. ಪ್ರತಿಯಾಗಿ ಟ್ವೀಟ್ ಮಾಡಿರುವ ಅಮಿತಾಭ್, `ಅಂಥ ದೊಡ್ಡ ಗೌರವಕ್ಕೆ ನಾನು ಅರ್ಹನಲ್ಲ. ಈಗ ದೇಶ ನನಗೆ ಈಗ ನೀಡಿರುವ ಗೌರವವನ್ನು ಅತ್ಯಂತ ವಿನಮ್ರ ವಾಗಿಸ್ವೀಕರಿಸುತ್ತೇನೆ' ಎಂದು ಹೇಳಿಕೊಂಡಿದ್ದಾರೆ
Advertisement