ಪ್ರಸ್ತುತ ಅಮರನಾಥ ದರ್ಶನಕ್ಕೆ ಕೇಂದ್ರ ಸರ್ಕಾರ ಅಮರನಾಥ ಯಾತ್ರೆಗೆ ಚಾಲನೆ ನೀಡಿದ್ದು, ಅವರ ರಕ್ಷಣೆಗಾಗಿ "ಆಪರೇಷನ್ ಶಿವ" ಎಂಬ ಹೆಸರಿನಲ್ಲಿ ಬಿಗಿ ಭಧ್ರತೆಯನ್ನೂ ಒದಗಿಸಿದೆ. ಇದರ ನಡುವೆಯೂ ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ ಅವರಿಗೆ ಅಮರಾನಾಥ ಯಾತ್ರಾರ್ಥಿಗಳ ಭದ್ರತೆ ಬಗ್ಗೆ ದಿಗಿಲು ಮೂಡಿದ್ದು, ಅವರ ಮೇಲೆ ಹಲ್ಲೆ ಅಥವಾ ಅವರಿಗೆ ಯಾವುದೇ ರೀತಿಯ ತೊಂದರೆ ನೀಡಿದರೆ ಹಜ್ ಯಾತ್ರಾರ್ಥಿಗಳು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.