ಕೋರ್ಟ್ ಒಪ್ಪಿದರೆ ಸಿಬಿಐಗೆ

ಇಡೀ ದೇಶವನ್ನು ಬೆಚ್ಚಿ ಬೀಳಿಸಿರುವ ವ್ಯಾಪಂ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ನನ್ನದೇನೂ ಅಭ್ಯಂತರ ಇಲ್ಲ. ಹೈಕೋರ್ಟ್ ಒಪ್ಪಿದರೆ ಪ್ರಕರಣವನ್ನು ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗೆ ಒಪ್ಪಿಸಲು ಸಿದ್ಧ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ...
ಭೋಪಾಲ್ ನಲ್ಲಿ ವ್ಯಾಪಂ ಹಗರಣ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಭೋಪಾಲ್ ನಲ್ಲಿ ವ್ಯಾಪಂ ಹಗರಣ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
Updated on

ನವದೆಹಲಿ/ಭೋಪಾಲ್: ಇಡೀ ದೇಶವನ್ನು ಬೆಚ್ಚಿ ಬೀಳಿಸಿರುವ ವ್ಯಾಪಂ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ನನ್ನದೇನೂ ಅಭ್ಯಂತರ ಇಲ್ಲ. ಹೈಕೋರ್ಟ್ ಒಪ್ಪಿದರೆ ಪ್ರಕರಣವನ್ನು ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗೆ ಒಪ್ಪಿಸಲು ಸಿದ್ಧ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಈ ನಡುವೆ ಅವರು ಪತ್ರಕರ್ತ ಅಜಯ್ ಸಿಂಗ್ ಅಸಹಜ ಸಾವಿನ ಕುರಿತು ಹೈಕೋರ್ಟ್ ನೇತೃತ್ವ ದ ಎಸ್ ಐಟಿ ತನಿಖೆಗೆ ವಹಿಸಲು ಕ್ರಮ ಕೈಗೊಳ್ಳುವುದಾಗಿ ಚೌಹಾಣ್ ಹೇಳಿದ್ದಾರೆ. ಈ ಸಂಬಂಧ ಅವರು ಎಸ್ ಐಟಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಏಮ್ಸ್ ನಲ್ಲಿ ಪರೀಕ್ಷೆ
ವ್ಯಾಪಂ ಹಗರಣದ ವರದಿ ಮಾಡಲು ಹೋಗಿ ಅನುಮಾನಾಸ್ಪದವಾಗಿ ಸಾವಿಗೀಡಾದ ಆಜ್ ತಕ್ ಪತ್ರಕರ್ತ ಅಕ್ಷಯ್ ಸಿಂಗ್ ಕರುಳಿನ ಭಾಗಗಳ ಪರೀಕ್ಷೆ ದೆಹಲಿಯ ಏಮ್ಸ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ವಿಚಾರವನ್ನು ಸ್ವತಹ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಖಚಿತಪಡಿಸಿದ್ದಾರೆ. ಅಕ್ಷಯ್ ಸಿಂಗ್ ಅನುಮಾನಾಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಸಾವಿನ ಕುರಿತು ತನಿಖೆ ನಡೆಸಬೇಕು, ಅವರ ಕರುಳಿನ ಭಾಗಗಳ ಪರೀಕ್ಷೆಯನ್ನು ಏಮ್ಸ್ ನಲ್ಲಿ ನಡೆಸಬೇಕೆಂದು ಅಕ್ಷಯ್ ಸಿಂಗ್ ಸಹೋದರಿ ಪಾಕ್ಷಿ ಸಿಂಗ್ ಆಗ್ರಹಿಸಿದ್ದರು. ಈ ಸಂಬಂಧ ಮುಖ್ಯಮಂತ್ರಿ ಚೌಹಾಣ್ ರಿಗೆ ಪತ್ರವನ್ನೂ ಬರೆದಿದ್ದರು. ಇದೇ ರೀತಿಯ ಬೇಡಿಕೆಯನ್ನು ಪ್ರತಿಪಕ್ಷಗಳೂ ಮುಂದಿಟ್ಟಿದ್ದವು.

ವೈದ್ಯ ಡಾ. ಶರ್ಮಾ, ಪತ್ರಕರ್ತ ಸಾವಿನ ಹಿನ್ನೆಲೆಯಲ್ಲಿ ಹಗರಣದ ಕುರಿತು ಸಿಬಿಐ ಅಥವಾ ಎಸ್ ಐಟಿ ತನಿಖೆ ಆಗಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com