ಉಗ್ರರಿಗೆ ಹಣಕಾಸಿನ ನೆರವು: ಹುರಿಯತ್ ಮುಖಂಡರ ವಿರುದ್ಧ ಇ.ಡಿ ಚಾರ್ಜ್ ಶೀಟ್

ಉಗ್ರರಿಗೆ ಹಣ ಸಹಾಯ ಮಾಡುತ್ತಿದ್ದ ಸಯೀದ್ ಅಲಿ ಷಾ ಗೀಲಾನಿ ನೇತೃತ್ವದ ಹುರಿಯತ್ ಕಾನ್ಫರೆನ್ಸ್ ನ ಇಬ್ಬರು ಮುಖಂಡರ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ದಾಖಲಿಸಿದೆ.
ಸಯೀದ್ ಅಲಿ ಷಾ ಗಿಲಾನಿ(ಸಂಗ್ರಹ ಚಿತ್ರ)
ಸಯೀದ್ ಅಲಿ ಷಾ ಗಿಲಾನಿ(ಸಂಗ್ರಹ ಚಿತ್ರ)

ನವದೆಹಲಿ: ಉಗ್ರರಿಗೆ ಹಣ ಸಹಾಯ ಮಾಡುತ್ತಿದ್ದ ಸಯೀದ್ ಅಲಿ ಷಾ ಗೀಲಾನಿ ನೇತೃತ್ವದ ಹುರಿಯತ್ ಕಾನ್ಫರೆನ್ಸ್ ನ ಇಬ್ಬರು ಮುಖಂಡರ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ದಾಖಲಿಸಿದೆ.

ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಸಂಘಟನೆಯ ಇಬ್ಬರು ಮುಖಂಡರು, ಇಟಲಿಯಿಂದ ಹಣ ಪಡೆದು ಅದನ್ನು ಅಕ್ರಮ ಚಟುವಟಿಕೆಗಳಿಗೆ ಉಪಯೋಗಿಸುತ್ತಿದ್ದರು, ಅಲ್ಲದೇ ಉಗ್ರರಿಗೆ ಧನಸಹಾಯವನ್ನು ಮಾಡುತ್ತಿದ್ದರು ಎಂದು ಜಾರಿ ನಿರ್ದೇಶನಾಲಯಲ ಆರೋಪಿಸಿದೆ.   

ಈ ಬಗ್ಗೆ ಮಾಹಿತಿ ನೀಡಿರುವ ಜಾರಿ ನಿರ್ದೇಶನಾಲಯದ ವಕ್ತಾರ, ಅಹಮ್ಮದ್ ಶಾ ಮತ್ತು ಯಾರ್ ಮುಹಮ್ಮದ್ ಖಾನ್ ವಿರುದ್ಧ ದಾಖಲಾಗಿರುವ ಚಾರ್ಜ್ ಶೀಟನ್ನು  ಸೆಷನ್ಸ್ ನ್ಯಾಯಾಧೀಶರಿಗೆ ತಲುಪಿಸಲಾಗಿದ್ದು, ಉಗ್ರರಿಗೆ ಹಣಕಾಸಿನ ನೆರವು ನೀಡುತ್ತಿದ್ದ ಪ್ರತ್ಯೇಕತಾವಾದಿ ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com