ವಾಲ್ಮೀಕಿ ಯಾರು? ಸರ್ಕಾರ ಸ್ಪಷ್ಟಪಡಿಸಲಿ: ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ

ಡಾ. ನಾರಾಯಣಾಚಾರ್ಯ ಅವರು ಬರೆದಿರುವ `ವಾಲ್ಮೀಕಿ ಯಾರು?' ವಿವಾದಿತ ಕೃತಿಯನ್ನು ಕಾನೂನಾತ್ಮಕವಾಗಿ ಮುಟ್ಟು-ಗೋಲು...
ವಾಲ್ಮೀಕಿ
ವಾಲ್ಮೀಕಿ
Updated on

ಬೆಂಗಳೂರು: ಡಾ. ನಾರಾಯಣಾಚಾರ್ಯ ಅವರು ಬರೆದಿರುವ `ವಾಲ್ಮೀಕಿ ಯಾರು?' ವಿವಾದಿತ ಕೃತಿಯನ್ನು ಕಾನೂನಾತ್ಮಕವಾಗಿ ಮುಟ್ಟು-ಗೋಲು ಹಾಕಿಕೊಳ್ಳಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಸರ್ಕಾರವನ್ನು ಒತ್ತಾಯಿಸಿದೆ.

ಸರ್ಕಾರ ಕಾನೂನು ರೀತಿಯಲ್ಲೇ `ವಾಲ್ಮೀಕಿ ಯಾರು' ಎಂಬ ಕೃತಿ-ಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸರ್ಕಾರ ಕೃತಿಯ ಮುಟ್ಟಿಗೋಲಿಗೆ ಮುಂದಾಗದಿದ್ದರೆ ಸಮಾಜದ ಜನರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮಹಾಸಭಾದ ರಾಜ್ಯಾಧ್ಯಕ್ಷ ಎಂ. ನರಸಿಂಹಯ್ಯ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಲೇಖಕ ಡಾ. ನಾರಾಯಣಾ-ಚಾರ್ಯರಷ್ಟೇ ಅಲ್ಲ, ಅಂತಹ ಸಾವಿರಾರು ಜನರು ಏನೇ ಹೇಳಿದರೂ ವಾಲ್ಮೀಕಿ ಬ್ರಾಹ್ಮಣನಾಗಲು ಸಾಧ್ಯವಿಲ್ಲ. ವಾಲ್ಮೀಕಿ `ಬೇಡ' ಜಾತಿಗೆ ಸೇರಿದವನೆಂಬುದು ಸೂರ್ಯಚಂದ್ರರಷ್ಟೇ ಸತ್ಯ. ಹಾಗಾಗಿ ಇನ್ನು ಮುಂದಾದರೂ ವಾಲ್ಮೀಕಿ ಸಮಾಜದ ಜನರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನವನ್ನು ಸಮಾಜದಲ್ಲಿ ಯಾರೂ ಮಾಡಬಾರದು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com