ಶುಕ್ರವಾರದಂದು ನಡೆದ ಎಐಪಿಎಂಟಿ ಮುಸ್ಲಿಂ ಅಭ್ಯರ್ಥಿಗಳಿಗೆ ಪರೀಕ್ಷೆ ಕೊಠಡಿಯೊಳಗೆ ಒಳಗೆ ತಲೆವಸ್ತ್ರ ಬಳಸಲು ಅನುಮತಿ ನೀಡದ ನಿಯಮಕ್ಕೆ ಸುಪ್ರೀಂಕೋಟ್ ಸಹಮತ ವ್ಯಕ್ತಪಡಿಸಿದ್ದಲ್ಲದೆ ಪರೀಕ್ಷಾ ಕೊಠಡಿಯೊಳಗೆ ತಲೆವಸ್ತ್ರ ಧರಿಸದಿದ್ದರೆ, ನಿಮ್ಮ ಧಾರ್ಮಿಕನಂಬಿಕೆಗಳೇನೂ ನಾಶವಾಗುವುದಿಲ್ಲ ಎಂದು ಹೇಳಿತ್ತು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೇರಳದ ಐಯುಎಂಎಲ್ ನಾಯಕ, ಸಂಸದ ಇ. ಟಿ. ಬಷೀರ್ ಸುಪ್ರೀಂ ಕೋರ್ಟ್ಗೆ ಮಾತ್ರವಲ್ಲ, ಯಾರಿಗೂ ಧಾರ್ಮಿಕ ನಂಬಿಕೆಗಳ ಕುರಿತು ಮಾತನಾಡುವ ಹಕ್ಕಿಲ್ಲ. ಇದು ಸಾಮಾನ್ಯ ವಿಷಯವಲ್ಲ. ಕೋರ್ಟ್ ತೀರ್ಪು ಧಾರ್ಮಿಕ ನಂಬಿಕೆಗಳ ವಿರುದ್ಧ ಬಂದಿದೆ.' ಎಂದು ಪ್ರತಿಭಟಿಸಿದ್ದಾರೆ.