ಮೆಮನ್ ಅಂತ್ಯಕ್ರಿಯೆಯಲ್ಲಿ ಉಗ್ರರು: ರಾಯ್

ಯಾಕೂಬ್ ಮೆಮನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರು ಸಂಭಾವ್ಯ ಭಯೋತ್ಪಾದಕರಿದ್ದರು ಎನ್ನುವ ಮೂಲಕ ತ್ರಿಪುರಾ ರಾಜ್ಯಪಾಲ ತಥಾಗತ ರಾಯ್ ಹೊಸ ವಿವಾದ ಸೃಷ್ಟಿಸಿದ್ದಾರೆ...
ತ್ರಿಪುರಾ ರಾಜ್ಯಪಾಲ ತಥಾಗತ ರಾಯ್
ತ್ರಿಪುರಾ ರಾಜ್ಯಪಾಲ ತಥಾಗತ ರಾಯ್
Updated on

ತ್ರಿಪುರಾ: ಯಾಕೂಬ್ ಮೆಮನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರು ಸಂಭಾವ್ಯ ಭಯೋತ್ಪಾದಕರಿದ್ದರು ಎನ್ನುವ ಮೂಲಕ ತ್ರಿಪುರಾ ರಾಜ್ಯಪಾಲ ತಥಾಗತ ರಾಯ್ ಹೊಸ ವಿವಾದ  ಸೃಷ್ಟಿಸಿದ್ದಾರೆ.

ರಾಯ್ ಹೇಳಿಕೆಗ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ಯಾಕೂಬ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರ ಮೇಲೆ ಗುಪ್ತಚರ ಇಲಾಖೆ ಕಣ್ಣಿಡಬೇಕು. ಸಂಬಂಧಿಗಳು, ಆಪ್ತ ಮಿತ್ರರ ಚಲನವಲನ ಗಮನಿಸಬೇಕು. ಅವರು ಉಗ್ರರಾಗಿರಲಿಕ್ಕೂ ಸಾಕು ಎಂದು ಅನುಮಾನ ವ್ಯಕ್ತಪಡಿಸಿ ರಾಯ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರಿಂದ ಎಚ್ಚೆತ್ತ ರಾಯ್, ಕೂಡಲೇ ಸ್ಪಷ್ಟನೆ ನೀಡಿದ್ದಾರೆ.

`ದೇಶದ ಭದ್ರತೆ ಕುರಿತು ರಾಜ್ಯಪಾಲರಾದವರಿಗೆ ಕಾಳಜಿ ಇರಬೇಕು. ಮುನ್ನೆಚ್ಚರಿಕೆ ಯಿಂದ ನಾನು ಹಾಗೆ ಹೇಳಿದ್ದೇನೆ'. ಇದು ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ನೀಡಿದ ಹೇಳಿಕೆಯಲ್ಲ ಎಂದಿದ್ದಾರೆ. ಥತಾಗತಾ ರಾಯ್ ಅವರು ಕೋಮುದ್ವೇಷ ಬಿತ್ತುವ ಟ್ವೀಟ್ ಗಳಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com