ಚಿನ್ನ 'ಕಳ್ಳಸಾಗಣೆ' ಆರೋಪ;ಏರ್ ಇಂಡಿಯಾ ವಿಮಾನ ಸಿಬ್ಬಂದಿ ಬಂಧನ

ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಏರ್ ಇಂಡಿಯಾ ವಿಮಾನದ ಸಿಬ್ಬಂದಿಯನ್ನು ಜೆದ್ದಾ ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದಾರೆ...
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ

ನವದೆಹಲಿ: ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಏರ್ ಇಂಡಿಯಾ ವಿಮಾನದ ಸಿಬ್ಬಂದಿಯನ್ನು ಜೆದ್ದಾ ವಿಮಾನ ನಿಲ್ದಾಣದ ಅಧಿಕಾರಿಗಳು  ಬಂಧಿಸಿದ್ದಾರೆ.

ಬಂಧಿತ ಸಿಬ್ಬಂದಿ ಇತರ 11 ಮಂದಿ ಸಿಬ್ಬಂದಿಗಳ ಜತೆ ಕೊಚ್ಚಿಗೆ ತೆರಳಬೇಕಿದ್ದ ವಿಮಾನಕ್ಕೆ ಹತ್ತಬೇಕಿತ್ತು. ಗುರುವಾರ ಬೆಳಗ್ಗೆ ವಿಮಾನ ಹೊರಡುವ ಹೊತ್ತಿಗೆ ಈ ಘಟನೆ ಬೆಳಕಿಗೆ ಬಂತು. ನಿಯಮದ ಪ್ರಕಾರ ಏರ್ ಇಂಡಿಯಾ ವಿಮಾನ ಹಾರಾಟ ನಡೆಸುವಾಗ 12 ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಆದರೆ  ಸಿಬ್ಬಂದಿಯನ್ನು ಬಂಧಿಸಿದ್ದರಿಂದ 11 ಮಂದಿ ಸಿಬ್ಬಂದಿ ಮಾತ್ರ ವಿಮಾನ ಏರಿದರು.

''ನಮ್ಮ ಸಿಬ್ಬಂದಿ ಇನ್ನೂ ಬಂಧನದಲ್ಲಿದ್ದಾರೆ. ಬಂಧನಕ್ಕೆ ಕಾರಣಗಳು ತಿಳಿದುಬಂದಿಲ್ಲ. ಏರ್ ಇಂಡಿಯಾ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ'' ಎಂದು ಏರ್ ಇಂಡಿಯಾ ವೈಮಾನಿಕ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com